Advertisement

ಡಿವೈಎಫ್ಐ ಬಹಿರಂಗ ಸಭೆ

02:25 PM Mar 28, 2017 | Team Udayavani |

ಉಳ್ಳಾಲ: ಅಪ್ರತಿಮ ಹೋರಾಟಗಾರ ಭಗತ್‌ ಸಿಂಗ್‌ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ಸಿಕ್ಕ ವರ್ಚಸ್ಸನ್ನೇ  ಹಿಂದೂವಾದಿಗಳು ದುರುಪಯೋಗಪಡಿಸಿ ಕೊಳ್ಳುವ ಮೂಲಕ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಸುವ ಕಾರ್ಯ ನಡೆಸುತ್ತಿರುವುದು ಖೇದಕರ.  ಭಗತ್‌ ಸಿಂಗ್‌ ಆದರ್ಶಗಳನ್ನು ಪಾಲಿಸುತ್ತಾ,  ಅವರ ಕನಸುಗಳನ್ನು  ಈಡೇರಿಸುವ ಕಾರ್ಯವನ್ನು ಡಿವೈಎಫ್‌ಐ ಮುಂದಿನ ದಿನಗಳಲ್ಲಿಯೂ ಮುನ್ನೆಡಸಲಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ  ಹೇಳಿದ್ದಾರೆ.

Advertisement

ಭಗತ್‌ ಸಿಂಗ್‌ ಹುತಾತ್ಮ ದಿನಾಚರಣೆ ಪ್ರಯುಕ್ತ  ಕಲ್ಲಾಪು ಯುನಿಟಿ ಹಾಲ್‌ನಿಂದ ತೊಕ್ಕೊಟ್ಟು ವರೆಗೆ ಡಿವೈಎಫ್‌ಐ ಉಳ್ಳಾಲ ವಲಯ ನೇತೃತ್ವದಲ್ಲಿ   ಗುರುವಾರ  ಜರಗಿದ ಯೂತ್‌ ಮಾರ್ಚ್‌ ಮತ್ತು  ತೊಕ್ಕೊಟ್ಟಿನಲ್ಲಿ ಜರಗಿದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನಿಲ್‌ ಕುಮಾರ್‌ ಬಜಾಲ್‌,   ರಾಜ್ಯಾ ಧ್ಯಕ್ಷ ಮುನೀರ್‌ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌,  ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮಿ¤ಯಾಝ್, ಆಶಾ ಬೋಳೂರು, ನವೀನ್‌ ಕೊಂಚಾಡಿ, ಅಶೋಕ್‌ ಶೆಟ್ಟಿ ಚೆಂಬುಗುಡ್ಡೆ, ಸುನಿಲ್‌ ತೇವುಲ, ಜೀವನರಾಜ್‌ ಕುತ್ತಾರ್‌, ಮನೋಜ್‌ ವಾಮಂಜೂರು, ರಫೀಕ್‌ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಕಲ್ಲಾಪುವಿನ ಯುನಿಟಿ ಹಾಲ್‌ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಯೂತ್‌ ಮಾರ್ಚ್‌ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next