Advertisement

ತೈಲೋತ್ಪನ್ನವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೂ ಬೆಲೆ ನಿಯಂತ್ರಣ ಕಷ್ಟ

06:00 AM Sep 23, 2018 | Team Udayavani |

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೂ ದರ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಜಿಎಸ್‌ಟಿ ಸಚಿವರ ತಂಡದ ಅಧ್ಯಕ್ಷ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

Advertisement

ಜಿಎಸ್‌ಟಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೂ ಜಿಎಸ್‌ಟಿ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರಲಿದೆ ಎಂದು ತಿಳಿಸಿದರು.

ಹಿಂದಿನ ಯುಪಿಎ ಸರ್ಕಾರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜೆಎಸ್‌ಟಿ ವ್ಯಾಪ್ತಿಗೆ ಒಳಪಡಿಸಿ ಸಂಸತ್ತಿನಲ್ಲಿ ಅನುಮೋದನೆ ಪಡೆಯಲಾಗಿದೆ. ಈಗ ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್‌ಟಿ ವಿಧಿಸುವ ಅಧಿಕಾರ ಜಿಎಸ್‌ಟಿ ಮಂಡಳಿಗೆ ಇದೆ. ಸೆಪ್ಟಂಬರ್‌ 28 ರಂದು ಜಿಎಸ್‌ಟಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸದ್ಯ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯದ ತೆರಿಗೆ ಸೇರಿ ಶೇ. 40 ರಿಂದ 50 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‌ ಟಿ ವ್ಯವಸ್ಥೆ ಸ್ಥಿರವಾದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಉತ್ತಮ ಎಂದು ತಿಳಿಸಿದರು.

ಜಿಎಸ್‌ಟಿ ಜಾರಿಗೆ ಬಂದ ನಂತರ 50.60 ಲಕ್ಷ ಜನ ಹೊಸ ತೆರಿಗೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ  ಶೇ. 13 ರಷ್ಟು  ಆದಾಯ ಕೊರತೆಯಾಗಿದೆ.  ಪ್ರತಿ ತಿಂಗಳು 1 ಲಕ್ಷ 3 ಸಾವಿರ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ಜುಲೈ ತಿಂಗಳಿನಲ್ಲಿ 93,960 ಕೋಟಿ ರೂ. ಸಂಗ್ರಹಿಸಲಾಗಿದೆ. ಜೂನ್‌ ತಿಂಗಳಿನಲ್ಲಿ 96,480 ಕೋಟಿ ರೂ.  ಸಂಗ್ರಹಿಸಲಾಗಿತ್ತು. ಆಗಸ್ಟ್‌ ತಿಂಗಳಿನಲ್ಲಿಯೂ ತೆರಿಗೆ ಸಂಗ್ರಹ ಕಡಿಮೆಯಾಗುವ ಸಾಧ್ಯತೆ ಇದ್ದು, ಜುಲೈ ಆಗಸ್ಟ್‌ ತಿಂಗಳಲ್ಲಿ ಮಳೆಗಾಲ ಇರುವುದರಿಂದ ಮದುವೆಯಂತಹ ಕಾರ್ಯಕ್ರಮಗಳು ನಡೆಯದಿರುವುದರಿಂದ ವ್ಯಾಪಾರ ವಹಿವಾಟು ಕಡಿಮೆಯಾಗುತ್ತದೆ . ನಿರೀಕ್ಷಿತ ಮಟ್ಟದಲ್ಲಿ ಜಿಎಸ್‌ಟಿ ಸಂಗ್ರಹವಾದರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೊರತೆಯಾಗುವ ತೆರಿಗೆಯನ್ನು ತುಂಬಿಕೊಡುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.

Advertisement

ಆಡಿಟ್‌ ತಾಂತ್ರಿಕ ತೊಂದರೆಯಿಂದ ಇ ವೇ ಬಿಲ್‌ ಸಂಗ್ರಹ ಕಡಿಮೆಯಾಗಿದೆ. ಇನ್‌ಫೋಸಿಸ್‌ಗೆ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದ್ದು, ಅಕ್ಟೋಬರ್‌ನಲ್ಲಿ   ಹೊಸ ಸಾಪ್ಟವೇರ್‌ ಸಿದ್ದಗೊಳ್ಳಲಿದೆ ಎಂದು ಹೇಳಿದರು. ಅಂತಾರಾಜ್ಯ ವಸ್ತುಗಳ ಸಾಗಾಣಿಕೆ ಮೂಲಕ ಶೇ. 48 % ಹಾಗೂ ರಾಜ್ಯದಲ್ಲಿಯೇ ಸಾಗಾಣಿಕೆ ಮಾಡಿರುವ ಶೇ. 51 ರಷ್ಟು ತೆರಿಗೆ ಸಂಗ್ರಹ ವಾಗುತ್ತಿದೆ. ದೇಶದಲ್ಲಿ ಶೇಕಡಾ 99.49 ರಷ್ಟು ಉತ್ಪನ್ನಗಳು ರಸ್ತೆ ಸಾರಿಗೆ ಮೂಲಕವೇ ಸಾಗಾಣಿಕೆ ಮಾಡಲಾಗುತ್ತಿದ್ದು, ಶೇಕಡಾ 0.51 ರಷ್ಟು ಮಾತ್ರ ರೈಲುಗಳ ಮೂಲಕ ಸಾಗಾಣಿಕೆ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ಉತ್ಪನ್ನಗಳು ಯಾವ ಕಾರಣಕ್ಕೆ ಎಲ್ಲಿಗೆ ಸಾಗಾಣಿಕೆ ಆಗುತ್ತಿವೆ ಎನ್ನುವ ಸಂಪೂರ್ಣ ಮಾಹಿತಿ ಇನ್ನೆರಡು ದಿನಗಳಲ್ಲಿ ಎಲ್ಲ ರಾಜ್ಯಗಳಿಗೂ ದೊರೆಯಲಿದೆ. ಇದರಿಂದ ಯಾವ ರಾಜ್ಯದಿಂದ ಎಷ್ಟು ಉತ್ಪನ್ನ ಯಾವ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ದೊರೆಯಲಿದೆ. ದೇಶದಲ್ಲಿ ಎಲೆಕ್ಟ್ರಿಕಲ್‌ ಮಷಿನ್‌ಗಳು ಹಾಗೂ ಟೆಕ್‌ಸ್ಟೈಲ್‌ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರಾಜ್ಯಕ್ಕೆ ಸಾಗಾಣಿಕೆಯಾಗಿದೆ ಎಂದು ಹೇಳಿದರು.

ಅಲ್ಲದೇ ಬೋಗಸ್‌ ಇನ್‌ವೈಸ್‌ ಸೃಷ್ಠಿಸಿ ತೆರಿಗೆ ವಂಚಿಸುವವರನ್ನೂ ಪತ್ತೆ ಹಚ್ಚಲು ಅನುಕೂಲವಾಗಲಿದೆ. ಈಗಾಗಲೇ ಕರ್ನಾಟಕ ಹಾಗೂ ದೆಹಲಿಯಲ್ಲಿ  ತಪ್ಪು ಮಾಹಿತಿ ನೀಡಿ ಬೋಗಸ್‌  ಇನ್‌ವೈಸ್‌ ಸೃಷ್ಠಿಸಿದ್ದ ನಾಲ್ವರನ್ನು ಬಂಧಿಸಲಾಗಿದೆ. ಆಗಸ್ಟ್‌ನಲ್ಲಿ ಅಧಿಕಾರಿಗಳು 8 ಲಕ್ಷ 65 ಸಾವಿರ ಬಿಲ್‌ಗ‌ಳ ಪರಿಶೀಲನೆ ನಡೆಸಿದ್ದು, 3588 ವರದಿಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಇನ್ನು ಸೇವಾ ಕ್ಷೇತ್ರದಲ್ಲಿ ತೆರಿಗೆ ಯಾವ ರಾಜ್ಯಕ್ಕೆ ಸೇರಬೇಕು ಎನ್ನುವ ಬಗ್ಗೆ ಗೊಂದಲ ಇದೆ. ರೈಲು, ಬ್ಯಾಂಕ್‌, ವಿಮಾನ ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರು ಯಾವ ರಾಜ್ಯದಲ್ಲಿ ಸೇವೆ ಪಡೆಯುತ್ತಾರೆ ಅದೇ ರಾಜ್ಯಕ್ಕೆ ತೆರಿಗೆ ಹೋಗುವಂತಾಗಬೇಕು. ಈಗ ಗ್ರಾಹಕರು ಪ್ರವಾಸ ಮಾಡುವಾಗ ಪ್ರವಾಸ ಮಾಡುವ ರಾಜ್ಯದ ಬದಲು ಯಾವ ರಾಜ್ಯಕ್ಕೆ ಹೋಗುತ್ತಾರೆ. ಆ ರಾಜ್ಯಕ್ಕೆ ತೆರಿಗೆ ಸೇರುತ್ತಿದೆ. ಸಾಪ್ಟವೇರ್‌ನ ಸಮಸ್ಯೆ ಉಂಟಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ತೆರಿಗೆ ಪಾವತಿಸಲು ಸರಳ ಮಾರ್ಗ ಕಂಡು ಹಿಡಿಯಲಾಗಿದ್ದು, ಬಿ ಟು ಸಿ ಗೆ ಸಹಜ್‌ ಬಿ ಟು ಬಿ ಮತ್ತು ಬಿ ಟು ಸಿ ಗೆ ಸುಗಮ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. 5 ಕೋಟಿ ರೂ. ಕಡಿಮೆ ವ್ಯವಹಾರ ಮಾಡುವವರು ಶೇ. 92 ರಷ್ಟಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡುತ್ತಾರೆ. ಶೇ. 20 ರಷ್ಟು ವ್ಯವಹಾರ  ಮಾಡುವವರು ತೆರಿಗೆ ವ್ಯಾಪ್ತಿಗೆ ಒಳ ಪಟ್ಟಿಲ್ಲ ಎಂದು ಹೇಳಿದರು.

ಪ್ರತಿ ವರ್ಷ ಡಿಸೆಂಬರ್‌ 31 ರೊಳಗೆ ತೆರಿಗೆ ಪಾವತಿ ಕಡ್ಡಾಯ ಮಾಡಲಾಗಿದ್ದು, ಹೊಸ ಆದಾಯ ರಿಟರ್ನ್ ಫಾರ್ಮ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕಾಮನ್‌ ಅಕೌಂಟಿಂಗ್‌ ಸಾಪ್ಟವೇರ್‌ ಡೆವಲೆಪ್‌ ಮಾಡಲು ಚಿಂತಿಸಲಾಗಿದ್ದು ಅದಕ್ಕಾಗಿ 18 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next