Advertisement

Bihar: 2017ರಲ್ಲಿ ನಡೆದ ಪ್ರಹಸನವೇ ನಿನ್ನೆ ನಡೆಯಿತು!: ಅಂದು BJPಗೆ, ಇಂದು RJD ಗೆ ಶಾಕ್‌

11:21 PM Jan 28, 2024 | Team Udayavani |

ಲಕ್ನೋ: ಭಾನುವಾರ ಬಿಹಾರದಲ್ಲಿ ನಡೆದ ಇಡೀ ದಿನದ ಬೆಳವಣಿಗೆಗಳು ದೇಶದ ಜನತೆಗೆ 2017ರ ಬೆಳವಣಿಗೆಯನ್ನು ನೆನಪಿಸಿತು. ಅಂದು ನಿತೀಶ್‌ ನಡೆಯು ಬಿಜೆಪಿಗೆ ಶಾಕ್‌ ನೀಡಿದರೆ, ಈ ಬಾರಿ ಆಘಾತಕ್ಕೊಳಗಾಗುವ ಸರಣಿ ಆರ್‌ಜೆಡಿಯದ್ದಾಗಿತ್ತು!

Advertisement

ಹೌದು, ಬಿಜೆಪಿ ಜತೆ ಮಾತುಕತೆ ಪೂರ್ಣಗೊಂಡಿದ್ದರೂ, ಎಲ್ಲೂ ನಿತೀಶ್‌ ಆಗಲೀ, ಅವರ ಪಕ್ಷವಾಗಲೀ ಎನ್‌ಡಿಎ ಜತೆ ಸೇರುತ್ತಿರುವುದಾಗಿ ಬಹಿರಂಗವಾಗಿ ಘೋಷಿಸಿರಲಿಲ್ಲ. ಭಾನುವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿ ನಿತೀಶ್‌ ರಾಜೀನಾಮೆ ಪತ್ರ ಹಸ್ತಾಂತರಿಸಿದರು. ಅಲ್ಲಿಂದ ವಾಪಸಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅಧಿಕೃತವಾಗಿ ಸೇರ್ಪಡೆಗೊಂಡು, ಸಂಜೆ ವೇಳೆಗೆ ಪ್ರಮಾಣವಚನ ಸ್ವೀಕರಿಸಿದರು.

2017ರಲ್ಲೂ ನಿತೀಶ್‌ ಮಾಡಿದ್ದು ಇದನ್ನೇ. ಅಂದು ಕೂಡ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ನಿತೀಶ್‌, ನಂತರ ರಾಜ್ಯಪಾಲರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಆರ್‌ಜೆಡಿ, ಕಾಂಗ್ರೆಸ್‌ ಜತೆಗಿನ ಮಹಾಘಟ ಬಂಧನಕ್ಕೆ ಸೇರ್ಪಡೆಯಾಗಿ, ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next