Advertisement

ನಗರವನ್ನು ಕಾಡಿದ ಮಳೆ

11:45 AM May 04, 2018 | |

ಬೆಂಗಳೂರು: ನಗರದಲ್ಲಿ ಮಳೆ ಮುಂದುವರಿದಿದ್ದು, ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ತೊಂದರೆ ಅನುಭವಿಸುವಂತಾಯಿತು. 

Advertisement

ಗುರುವಾರ ಸಂಜೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿ 8.30ರ ವೇಳೆಗೆ ಗಾಳಿಯೊಂದಿಗೆ ಆರಂಭವಾದ ಮಳೆಯಿಂದಾಗಿ ನಗರದ ಕೆಲವೆಡೆ 10ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. ಟೆಂಡರ್‌ ಶ್ಯೂರ್‌ ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕುವಂತಾಯಿತು. 

ಬಸವನಗುಡಿ, ಸಾರಕ್ಕಿ, ಬೇಗೂರು, ಕೊಡಿಗೆಹಳ್ಳಿ, ಯಲಹಂಕ, ಕೆ.ಆರ್‌.ಪುರ, ಅಗ್ರಹಾರ ದಾಸರಹಳ್ಳಿ, ಕೋರಮಂಗಲ, ರಾಜರಾಜೇಶ್ವರಿ ನಗರ, ಕೋಗಿಲು, ಬೊಮ್ಮನಹಳ್ಳಿ, ಹೊಂಗಸಂದ್ರ, ರೂಪೇನ ಅಗ್ರಹಾರ, ಸದಾಶಿವನಗರ, ಮೆಜೆಸ್ಟಿಕ್‌, ಸಂಪಂಗಿ ರಾಮನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಜತೆಗೆ ಗಂಗಮ್ಮ ವೃತ್ತ, ಮಾಗಡಿ ರಸ್ತೆ, ವೈಯಾಲಿ ಕಾವಲ್‌, ಮಲ್ಲೇಶ್ವರ, ಯಲಹಂಕ ಸೇರಿದಂತೆ ಹಲವೆಡೆ 10ಕ್ಕೂ ಹೆಚ್ಚು ಮರ ಹಾಗೂ ಕೊಂಬೆಗಳು ಧರೆಗುರುಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next