Advertisement

ತೇಜಸ್ವಿ ಸೂರ್ಯ ಬಿರುಸಿನ ರೋಡ್‌ ಶೋ

10:47 AM Apr 06, 2019 | Vishnu Das |

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದ
ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಶುಕ್ರವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ ಶೋ ಮತ್ತು ಬೈಕ್‌ ರ್ಯಾಲಿ ನಡೆಸುವ ಮೂಲಕ ಮತಯಾಚನೆ ಮಾಡಿದರು.

Advertisement

ಬೆಳಿಗ್ಗೆ 11.30ಕ್ಕೆ ಊರ್ವಶಿ ಚಿತ್ರಮಂದಿರದಿಂದ ಆರಂಭಗೊಂಡ ರೋಡ್‌ ಶೋ ಲಾಲ್‌ಬಾಗ್‌ ರಸ್ತೆಯ ಪ್ರಮುಖ ಬೀದಿ ಗಳಲ್ಲಿ, ಸಂಚರಿಸಿ, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡನಗರ, ಚಿನ್ನಯ್ಯನಪಾಳ್ಯ, ಲಕ್ಕಸಂದ್ರ, ಸೋಮೇಶ್ವರನಗರ, ಮಾರ್ಗವಾಗಿ ಅಶೋಕ ಪಿಲ್ಲರ್‌ವರೆಗೂ
ನಡೆದ ಪ್ರಚಾರದ ರ್ಯಾಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ತೆರೆದ ವಾಹನದಲ್ಲಿ ಆರಂಭಗೊಂಡ ತೇಜಸ್ವಿ ಸೂರ್ಯರವರ ರೋಡ್‌ ಶೋ ಗೆ ಬೆಂಬಲವಾಗಿ ಕಾರ್ಯಕರ್ತರು ಬೈಕ್‌ ಗಳಲ್ಲಿ ರ್ಯಾಲಿ ನಡೆಸಿದರು. ಶಾಸಕ ಉದಯ ಗರುಡಾಚಾರ್‌, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಸದಾಶಿವ, ಸತ್ಯರಾಜ್‌, ನಗರ ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಎಲ್ಲ
ಸಮುದಾಯಗಳಿಂದ ಅದ್ಭುತ ಬೆಂಬಲ ವ್ಯಕ್ತವಾಗುತ್ತಿರುವುದು ಸಂತಸ ತಂದಿದ್ದು, ಸದೃಢ ಭಾರತದ ನಿರ್ಮಾಣಕ್ಕಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಪುನರಾಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಚಿಕ್ಕಪೇಟೆ ಶಾಸಕ ಉದಯ್‌ ಗರುಡಾಚಾರ್‌ ಬಹು ಅಂತರದ ಮತಗಳಿಂದ ವಿಧಾನಭೆಗೆ ಆಯ್ಕೆಮಾಡಿದ್ದೀರಿ. ಅದೇ ರೀತಿ ತೇಜಸ್ವಿ ಸೂರ್ಯರನ್ನು ಲೋಕಸಭೆಗೆ ಬಹುಮತ ಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿ
ಕೊಂಡರು. ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುರ್ಮಾ ರವರ ಮಾರ್ಗದಲ್ಲೇ, ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ತೇಜಸ್ವಿ ಸೂರ್ಯ ಅವರವರನ್ನು ನವ ಬೆಂಗಳೂರು
ನಿರ್ಮಾಣಕ್ಕಾಗಿ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕಾಗಿದೆ ಎಂದರು. ಇದಕ್ಕೂ ಮುನ್ನ, ತೇಜಸ್ವಿ ಸೂರ್ಯರವರು ಅರೆಕೆರೆ ವಾರ್ಡ್‌ ನ
ಶಾಂತಿನಿಕೇತನ್‌ ಲೇಔಟ್‌ನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು. ಈ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ, ಭಾಗ್ಯಲಕ್ಷಿ¾à ಮುರಳಿ, ರವಿ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next