Advertisement

State Govt ಸಹಾಯಕ ಪ್ರಾಧ್ಯಾಪಕರ ಶೀಘ್ರ ನೇಮಕಾತಿಗೆ ಸುರೇಶ್‌ ಪತ್ರ

12:09 AM Jul 13, 2024 | Team Udayavani |

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಮೂರು ವರ್ಷವಾಗಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ನೇಮಕಾತಿ ಪತ್ರ ಕೊಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಖಂಡಿಸಿದ್ದಾರೆ.

Advertisement

ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಅವರಿಗೆ ಪತ್ರ ಬರೆದಿರುವ ಸುರೇಶ್‌ ಕುಮಾರ್‌, ನೇಮಕಾತಿಗೆ ಆಧಿಸೂಚನೆ ಆದಂದಿನಿಂದಲೂ ಕೋರ್ಟ್‌ ಕೇಸ್‌, ಚುನಾವಣ ನೀತಿ ಸಂಹಿತೆ, ವರ್ಗಾವಣೆ ಕಾಯ್ದೆ ತಿದ್ದುಪಡಿ ಹೀಗೆ ಕಾರಣಗಳನ್ನು ಹೇಳುತ್ತ ಅರ್ಹ ಅಭ್ಯರ್ಥಿಗಳು ಇನ್ನೆಷ್ಟು ದಿನ ಕೆಲಸವಿಲ್ಲದೆ ಕಾಯಬೇಕು. ನೇಮಕಾತಿ ಅಧಿಸೂಚನೆ ಹೊರಟು ಮೂರು ವರ್ಷಗಳೇ ಆಗಿವೆ. ಇಷ್ಟೋತ್ತಿಗೆ ಮಕ್ಕಳಿಗೆ ಪಾಠ ಮಾಡಬೇಕಿದ್ದ ಪ್ರಾಧ್ಯಾಪಕರು ಸ್ವಾತಂತ್ರ್ಯ ವನದಲ್ಲಿ ಸತ್ಯಾಗ್ರಹ ಮಾಡುತ್ತ ಕೂರುವ ಪರಿಸ್ಥಿತಿ ಬಂದಿದೆ ಎಂದು ದೂರಿದ್ದಾರೆ.

ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ಕೊಡುತ್ತೇವೆ ಎಂದು ಹೇಳಿದ್ದ ಸರಕಾರ ಕೆಲಸ ಕೊಟ್ಟು ಬದ್ಧತೆ ತೋರಬೇಕು, ಅಭ್ಯರ್ಥಿಗಳಿಗೆ ಉದ್ಯೋಗ ಕೊಡುವುದು ನ್ಯಾಯಯುತ ಕ್ರಮವಾಗಿದ್ದು ಈ ದಿಕ್ಕಿನಲ್ಲಿ ಸರಕಾರ ಕಾರ್ಯಪ್ರವೃತ್ತಗೊಳ್ಳಬೇಕು. ಯುವಕ ಯುವತಿಯರ ಶೋಕಗಾಥೆಯನ್ನು ಆಲಿಸಿ ಸರಕಾರ ಅವರಿಗೆ ಸ್ಪಂದಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next