Advertisement

ವಿನಯ್ “ಅನಂತ’ನಿಗೆ ಕಿಚ್ಚ ಸುದೀಪ್ ಸಾಥ್

11:14 AM Dec 30, 2018 | Team Udayavani |

ಸುಧೀರ್ ಶಾನುಭೋಗ್ ನಿರ್ದೇಶನದ ರಾಯಲ್​ ಸ್ಟಾರ್ ವಿನಯ್ ರಾಜ್​ಕುಮಾರ್​ ಅಭಿನಯದ “ಅನಂತು V/S ನುಸ್ರತ್’ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ವಿನಯ್ ರಾಜ್​ಕುಮಾರ್​ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕೋರ್ಟ್​ನಲ್ಲಿ ನ್ಯಾಯದ ಪಾಠದ ಜೊತೆಗೆ ಪ್ರೀತಿ ಪಾಠವನ್ನು ಆರಂಭಿಸಿದ್ದಾರೆ. ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್​ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ.

Advertisement

ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್​ಗೆ ಮನಸೋತಿರುವ ವಕೀಲನ ಕಥೆ ಚಿತ್ರದಲ್ಲಿದೆ. ಇನ್ನು ಸ್ಯಾಂಡಲ್​ವುಡ್‍ನ ಸ್ಟಾರ್ ಗಳೂ ಈಗಾಗಲೇ ಚಿತ್ರಕ್ಕೆ ಶುಭಕೋರಿದ್ದು, ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಚಿತ್ರಕ್ಕೆ ಆಲ್​ ದಿ ಬೆಸ್ಟ್ ಎಂದಿದ್ದಾರೆ.

ಯೆಸ್, “ಅನಂತು V/S ನುಸ್ರತ್’ ಚಿತ್ರಕ್ಕೆ ಈಗಾಗಲೇ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ವೀಟರ್ ಖಾತೆಯಲ್ಲಿ “ಸಿನಿಮಾ ಕುರಿತು ಒಳ್ಳೆಯ ವಿಮರ್ಶೆ ಕೇಳಿ ಬರುತ್ತಿದೆ. ಹೀಗಾಗಿ ವಿನಯ್​ ಮತ್ತು ಚಿತ್ರತಂಡವರಿಗೆ ಶುಭಾಶಯ. ಪರಿಶ್ರಮಕ್ಕೆ ತಕ್ಕದಾದ ಫಲ ಸಿಕ್ಕಿದೆ’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next