Advertisement

ಜೆಡಿಎಸ್‌ಗೆ ಸುದೀಪ್‌ ಬೆಂಬಲ?

07:00 AM Apr 04, 2018 | Team Udayavani |

ಹಾಸನ: ಸುದೀಪ್‌ ಅವರು ಚಿತ್ರರಂಗದಲ್ಲಿ ಕಷ್ಟಪಟ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರನ್ನು ನಾನು ದುರುಪಯೋಗ ಮಾಡಿಕೊಳ್ಳುವುದಿಲ್ಲ. ಆದರೆ ರಾಜ್ಯದಲ್ಲಿ ಉತ್ತಮ ಸರ್ಕಾರ ರಚನೆಯಾಗಬೇಕಾದರೆ ರಾಜ್ಯದ ಜವಾಬ್ದಾರಿಯುತ ಪ್ರಜೆಯಾಗಿ ಅವರ ಶಕ್ತಿಯನ್ನು ಎಲ್ಲಿಗೆ ಧಾರೆ ಎರೆಯಬೇಕೋ ಅಲ್ಲಿಗೆ ಧಾರೆ ಎರೆಯಲು ಕೋರಲಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ
ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀಪ್‌ ಮತ್ತು ನನ್ನ ನಡುವೆ ಹಿಂದಿನಿಂದಲೂ ಆತ್ಮೀಯ ಸಂಬಂಧವಿದೆ. ಸುದೀಪ್‌ ಹುಟ್ಟು ಹಬ್ಬಕ್ಕೆ ಹೋಗಿ ಅವರ ಮನೆಯಲ್ಲಿ ಭೋಜನ ಸವಿದು ಬಂದಿದ್ದೆ. ಅವರೂ ನನ್ನ ಮನೆಗೆ ಬಂದಿದ್ದರು. ಅದು ಸೌಹಾರ್ದ ಭೇಟಿ. ಆ ಸಂದರ್ಭದಲ್ಲಿ ರಾಜಕೀಯವಾಗಿಯೂ ಚರ್ಚಿಸಿದ್ದೇವೆ. ಆದರೆ ನಮ್ಮ ಪಕ್ಷಕ್ಕೆ ಸೇರಬೇಕೆಂದು ಒತ್ತಡ ಹಾಕಲ್ಲ. ನನ್ನ ವೈಯಕ್ತಿಕ ಸ್ವಾರ್ಥಕ್ಕೆ ಅವರ ವೃತ್ತಿ ಜೀವನ ಹಾಳು ಮಾಡಲು ಬಯಸಲ್ಲ. ಆದರೆ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ರಚನೆಯಾಗಬೇಕಾದರೆ ಅವರ ಶಕ್ತಿಯನ್ನು ಯಾರಿಗೆ ಧಾರೆ ಎರೆಯಬೇಕೆಂಬುದನ್ನು ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next