Advertisement

ಉದ್ಘರ್ಷ ಟ್ರೇಲರ್‌ಗೆ ಸುದೀಪ್‌-ದರ್ಶನ್‌ ಸಾಥ್‌

05:57 AM Mar 03, 2019 | |

ಕಳೆದ ಶುಕ್ರವಾರ ತೆರೆಕಂಡ “ಯಜಮಾನ’ ಚಿತ್ರದಲ್ಲಿ ಖಡಕ್‌ ವಿಲನ್‌ ಆಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎದುರು ಅಬ್ಬರಿಸಿದ್ದ ನಟ ಅನೂಪ್‌ ಸಿಂಗ್‌ ಠಾಕೂರ್‌, ಶೀಘ್ರದಲ್ಲಿಯೇ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ “ಉದ್ಘರ್ಷ’ ಚಿತ್ರದಲ್ಲಿ ಅನೂಪ್‌ ಸಿಂಗ್‌ ಠಾಕೂರ್‌ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನ ಕೊನೆ ಹಂತದಲ್ಲಿರುವ “ಉದ್ಘರ್ಷ’ ಚಿತ್ರದ ಫ‌ಸ್ಟ್‌ ಟ್ರೇಲರ್‌ ಇದೇ ಮಾ. 5ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 

Advertisement

ಇನ್ನೊಂದು ವಿಶೇಷವೆಂದರೆ, ಅನೂಪ್‌ ಸಿಂಗ್‌ ಠಾಕೂರ್‌ ಅವರ “ಉದ್ಘರ್ಷ’ ಚಿತ್ರಕ್ಕೆ ಕನ್ನಡದ ಸ್ಟಾರ್‌ ನಟರಾದ ಕಿಚ್ಚ ಸುದೀಪ್‌ ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇಬ್ಬರೂ ಸಾಥ್‌ ನೀಡುತ್ತಿದ್ದಾರೆ. “ಉದ್ಘರ್ಷ’ ಚಿತ್ರದ ಟ್ರೇಲರ್‌ಗೆ ಕಿಚ್ಚ ಸುದೀಪ್‌ ಹಿನ್ನೆಲೆ ಧ್ವನಿಯನ್ನು ನೀಡಿದ್ದು, ಇನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಲಿದ್ದಾರೆ.  ಅಂದಹಾಗೆ, “ಉದ್ಘರ್ಷ’ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ.

ಕನ್ನಡ, ತೆಲುಗು, ಮಲೆಯಾಳಂನಲ್ಲಿ “ಉದ್ಘರ್ಷ’ ಹೆಸರಿನಲ್ಲಿ ಮತ್ತು ತಮಿಳಿನಲ್ಲಿ “ಉಚ್ಚಕಟ್ಟಂ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ನಾಲ್ಕೂ ಭಾಷೆಗಳಲ್ಲೂ ಏಕಕಾಲಕ್ಕೆ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಚಿತ್ರವನ್ನು ಕೂಡ ಏಕಕಾಲದಲ್ಲೇ ತೆರೆಗೆ ತರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. “ಉದ್ಘರ್ಷ’ ಚಿತ್ರದಲ್ಲಿ ಬಹುಭಾಷಾ ಕಲಾವಿದರ ಬಹುದೊಡ್ಡ ದಂಡೇ ಇದೆ. ಚಿ

ತ್ರದಲ್ಲಿ ಅನೂಪ್‌ ಸಿಂಗ್‌ ಠಾಕೂರ್‌ ಅವರಿಗೆ ನಾಯಕಿಯಾಗಿ “ಕಬಾಲಿ’ ಖ್ಯಾತಿಯ ಸಾಯಿ ಧನ್ಸಿಕಾ ಜೋಡಿಯಾಗಿದ್ದಾರೆ. ಉಳಿದಂತೆ ತಾನ್ಯಾ ಹೋಪ್‌, ಕಬೀರ್‌ ಸಿಂಗ್‌ ದುಹಾನ್‌, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌, ಹರ್ಷಿಕಾ ಪೂಣತ್ಛ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಬಾಲಿವುಡ್‌ನ‌ ಮಾಸ್ಟರ್‌ ಸಂಜೋಯ್‌ ಚೌಧುರಿ ಸಂಗೀತ ಸಂಯೋಜಿಸಿದ್ದಾರೆ. ದೇವರಾಜ್‌ .ಆರ್‌ “ಉದ್ಘರ್ಷ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. 

ಒಟ್ಟಾರೆ ಕನ್ನಡದಲ್ಲಿ ಹತ್ತಾರು ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರಗಳನ್ನು ನೀಡಿ ಸಿನಿ ಪ್ರಿಯರ ಮನಗೆದ್ದಿರುವ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ “ಉದ್ಘರ್ಷ’ ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದು, “ಉದ್ಘರ್ಷ’ ಟ್ರೇಲರ್‌ ನೋಡಿದ ಪ್ರೇಕ್ಷಕರು ಹೇಗೆ ಉದ್ಗರಿಸುತ್ತಾರೆ ಅನ್ನೋದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next