Advertisement

ಬಿಹಾರದಲ್ಲಿ ಮತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ

04:49 PM Jan 21, 2023 | Team Udayavani |

ಕತಿಹಾರ್ : 20 ದಿನಗಳ ಒಳಗೆ ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಶನಿವಾರ ಕಲ್ಲು ತೂರಾಟ ನಡೆದ ಎರಡನೇ ಘಟನೆ ನಡೆದಿದ್ದು, ರೈಲ್ವೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

Advertisement

ಕತಿಹಾರ್ ಜಿಲ್ಲೆಯ ಬಲರಾಮ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲು ಸಂಖ್ಯೆ 22302 ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಿ6 ಸಂಖ್ಯೆಯ ಬೋಗಿಯ ಕಿಟಕಿ ಗಾಜುಗಳು ಜಖಂಗೊಂಡಿವೆ. ರೈಲಿನ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು.

ಕಲ್ಲು ತೂರಾಟದಿಂದ ಯಾವುದೇ ವ್ಯಕ್ತಿಗೆ ಗಾಯಗಳು ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next