Advertisement

KGF ನಲ್ಲಿ ಚಿನ್ನದ ಗಣಿಗಾರಿಕೆ ರಾಜ್ಯ ಹಿಂದೇಟು- ಕೇಂದ್ರದ ಅನುಮತಿಗೆ ರಾಜ್ಯ ಸರಕಾರದಿಂದ ತಡೆ

10:55 PM Feb 01, 2024 | Team Udayavani |

ಬೆಂಗಳೂರು: ಹಲವು ದಶಕಗಳಿಂದ ಮುಚ್ಚಿದ್ದ ಕೆಜಿಎಫ್ನಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಲು ಕೇಂದ್ರ ಸರಕಾರ ಉತ್ಸುಕವಾಗಿದ್ದರೂ ರಾಜ್ಯ ಸರಕಾರ ಹಿಂದೇಟು ಹಾಕಿದೆ. ಕೇಂದ್ರ ಸರಕಾರ ಅನುಮತಿ ಕೊಟ್ಟರೂ, ರಾಜ್ಯ ಸರಕಾರ ಒಪ್ಪುತ್ತಿಲ್ಲ.

Advertisement

ರಾಯಚೂರಿನ ಹಟ್ಟಿ ಚಿನ್ನದ ಗಣಿಯಿಂದ ವಾರ್ಷಿಕ 2-3 ಟನ್‌ ಮಾತ್ರ ಚಿನ್ನ ಉತ್ಪಾದನೆ ಆಗುತ್ತಿದ್ದು, 900-1000 ಟನ್‌ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಕೆಜಿಎಫ್ಗೆ ಮರುಜೀವ ನೀಡಬಹುದು ಎಂದು ಕೇಂದ್ರ ಖನಿಜ ಸಚಿವಾಲಯ ಅಭಿಪ್ರಾಯಪಟ್ಟಿತ್ತು. ಭಾರತೀಯ ಸ್ಟೇಟ್‌ ಬ್ಯಾಂಕ್‌ ಮೂಲಕ ಅಗತ್ಯ ಆರ್ಥಿಕ ನೆರವಿನ ಭರವಸೆಯನ್ನೂ ನೀಡಿತ್ತು.

ಅದರಂತೆ ಗಣಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದ ಭಾರತ್‌ ಚಿನ್ನದ ಗಣಿ ಸಂಸ್ಥೆ ಬಿಜಿಎಂಎಲ್‌ನಿಂದ ಆವೃತಗೊಂಡಿರುವ ಕೋಲಾರದ ಕೆಜಿಎಫ್ ಸುತ್ತಮುತ್ತಲಿನ 1,300 ಎಕ್ರೆ ಪ್ರದೇಶದಲ್ಲಿ ಲಭ್ಯವಿರುವ ಟೈಲಿಂಗ್‌ ಡಂಪ್‌ಗ್ಳಿಗೆ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ಕಲಂ 17ರ ಅನ್ವಯ ಕೇಂದ್ರ ಸರಕಾರದಿಂದ ಗಣಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ಕೊಡಲಾಗಿದೆ.

ಆದರೆ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯ ಮುಂದೆ ಬಂದಿದ್ದ ಈ ವಿಚಾರವನ್ನು ಮುಂದೂಡುವ ಮೂಲಕ ಕೇಂದ್ರದ ಅನುಮತಿಗೆ ರಾಜ್ಯ ಸರಕಾರ ತಡೆಯೊಡ್ಡಿದೆ.

Advertisement

Udayavani is now on Telegram. Click here to join our channel and stay updated with the latest news.

Next