Advertisement

Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು

01:24 AM Oct 09, 2024 | Team Udayavani |

ಮಂಗಳೂರು: ದಸರಾ ಸಡಗರದ ಮಧ್ಯೆ ನಡೆಯಲಿರುವ ಹುಲಿ ವೇಷದ ಅಬ್ಬರಕ್ಕೆ ಈ ಬಾರಿ ತಾರಾ ಮೆರುಗು ಆಕರ್ಷಣೆ ಹುಟ್ಟುಹಾಕಿದೆ.

Advertisement

ವಿಶೇಷವೆಂದರೆ ಇದೇ ಮೊದಲ ಬಾರಿ ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿವಂ ದುಬೆ ಹಾಗೂ ನಟ ಸಂಜಯ್‌ ದತ್‌ ಹುಲಿ ವೇಷದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಅ. 12ರಂದು ಮಧ್ಯಾಹ್ನ ಬಳ್ಳಾಲ್‌ಬಾಗ್‌ನಲ್ಲಿ ನಡೆಯಲಿರುವ ಹುಲಿವೇಷದ ಪೂರ್ವಭಾವಿಯಾಗಿ ಹಮ್ಮಿಕೊಳ್ಳುವ “ಊದುಪೂಜೆ’ಗೆ ಖ್ಯಾತ ಬಾಲಿವುಡ್‌ ನಟ ಸಂಜಯ್‌ ದತ್‌ ಆಗಮಿಸಲಿದ್ದಾರೆ ಎನ್ನಲಾಗಿದೆ.

ಅ. 12ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ “ಪಿಲಿ ನಲಿಕೆ’ಯಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿವಂ ದುಬೆ ಅವರಲ್ಲದೇ ಬಾಲಿವುಡ್‌ ನಟ ಅಹನ್‌ ಶೆಟ್ಟಿ, ನಟರಾದ ರಿಷಭ್‌ ಶೆಟ್ಟಿ, ರಾಜ್‌ ಬಿ.ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next