Advertisement

ಲತಾ ಮಂಗೇಶ್ಕರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಶಾರುಖ್: ‘ಜಾತ್ಯಾತೀತ ಭಾರತ’ಎಂದ ನೆಟ್ಟಿಗರು

11:14 AM Feb 07, 2022 | Team Udayavani |

ಮುಂಬೈ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ನಿಧನರಾದರು. ಸಂಜೆ 6.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಾಜಿ ಗಾರ್ಡನ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಲತಾ ಅವರ ಸಹೋದರನ ಪುತ್ರ ಆದಿನಾಥ್ ಮಂಗೇಶ್ಕರ್ ಅವರು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿದರು.

Advertisement

ಶಿವಾಜಿ ಪಾರ್ಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಶಾರುಖ್ ಖಾನ್ ಮುಂತಾದವರು ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆದರು.

ಸೂಪರ್‌ ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅಂತಿಮ ನಮನ ಸಲ್ಲಿಸುತ್ತಿರುವ ಚಿತ್ರವು ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಸಂಕಷ್ಟದ ಸಮಯದಲ್ಲಿ ಬಿಸಿಸಿಐ ಮಾನ ಕಾಪಾಡಿದ್ದ ಲತಾ ಮಂಗೇಶ್ಕರ್‌!

ವೈರಲ್ ಚಿತ್ರದಲ್ಲಿ, ಶಾರುಖ್ ಖಾನ್ ದುವಾ ಮಾಡುತ್ತಿದ್ದರೆ, ಪೂಜಾ ದದ್ಲಾನಿ ಅವರು ಹಿಂದೂ ಸಂಪ್ರದಾಯ ಪ್ರಕಾರ ಕೈ ಮುಗಿದು ನಮಸ್ಕರಿಸುವುದನ್ನು ಕಾಣಬಹುದು. ಶಾರುಖ್ ಖಾನ್ ಅವರು ಲತಾ ಮಂಗೇಶ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ನಂತರ ದುವಾ ಪಠಿಸಿದರು. ನಂತರ ಲತಾ ಮಂಗೇಶ್ಕರ್ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

Advertisement

ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ‘ಇದೇ ಜಾತ್ಯಾತೀತ ಭಾರತ’ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

“ಕೆಲವು ಧರ್ಮಾಂಧರಿಗೆ ಭಾರತವನ್ನು ಒಗ್ಗೂಡಿಸುವ ಈ ಸುಂದರ ದೃಶ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ! ನಿಜವಾಗಿಯೂ ಲತಾ ಮಂಗೇಶ್ಕರ್ ಅವರು ಬದುಕಿದ್ದಾಗ ಮತ್ತು ನಿಧನ ಹೊಂದಿದ ಬಳಿಕವು ಜನರನ್ನು ಒಗ್ಗೂಟಿಸುವ ಕೆಲಸ ಮಾಡುತ್ತಿದ್ದಾರೆ! ಪ್ರೀತಿಯನ್ನು ಹರಡುವ ಆ ತಳಿಗಳಲ್ಲಿ ಶಾರುಖ್ ಖಾನ್ ಕೂಡ ಒಬ್ಬರು” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next