Advertisement

Soon ವಿಮಾನ ಟಿಕೆಟ್‌ ದರ ಕಡಿತ?: ಸಚಿವ ನಾಯ್ಡು ಸುಳಿವು

01:36 AM Jun 14, 2024 | Team Udayavani |

ಹೊಸದಿಲ್ಲಿ: ವಿಮಾನ ಪ್ರಯಾಣ ಈಗಲೂ ಲಕ್ಷಾಂತರ ಭಾರತೀಯರಿಗೆ ಕನಸಾಗಿಯೇ ಉಳಿದಿರುವ ಈ ಹೊತ್ತಲ್ಲಿ ಜನಸಾಮಾನ್ಯರಿಗೂ ಅಗ್ಗದ ದರಕ್ಕೆ ವಿಮಾನಯಾನ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಕೇಂದ್ರದ ನೂತನ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ನೀಡಿದ್ದಾರೆ.

Advertisement

ಸದ್ಯದಲ್ಲೇ ವಿಮಾನ ಟಿಕೆಟ್‌ ದರ ಇಳಿಕೆ ಮಾಡುವ ಸುಳಿವನ್ನು ಸಚಿವರು ನೀಡಿದ್ದಾರೆ. ಗುರುವಾರ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮಾರುಕಟ್ಟೆ ಸನ್ನಿವೇಶ, ಕೋವಿಡ್‌ ಪರಿಣಾಮದಿಂದ ವಿಮಾನ ದರ ಏರಿಕೆಯಾಗಿವೆ. ಸಾಮಾನ್ಯ ಜನರಿಗೂ ವಿಮಾನಯಾನದ ಸೌಲಭ್ಯ ದೊರೆಯಬೇಕು. ಅದಕ್ಕಾಗಿ ವಿಮಾನ ದರ ಕಡಿಮೆಗೊಳಿಸುವುದೇ ನನ್ನ ಧ್ಯೇಯ ಎಂದು ತಿಳಿಸಿದರು.

21 ಬಾರಿ ರಾಮನಾಮ
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮುನ್ನ ರಾಮ್‌ ಮೋಹನ್‌ ನಾಯ್ಡು 21 ಬಾರಿ ರಾಮನಾಮ ಬರೆದಿದ್ದಾರೆ. ಗುರುವಾರ ಮಧ್ಯಾಹ್ನ ಸರಿಯಾಗಿ 1:11 ಗಂಟೆಗೆ “ಓಂ ಶ್ರೀರಾಮ್‌’ ಎಂದು 21 ಬಾರಿ ಬರೆದ ಬಳಿಕವೇ ಅವರು ಅಧಿಕಾರ ಸ್ವೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next