Advertisement

ಪಾಕ್ ಅಪ್ರಚೋದಿತ ದಾಳಿಯಲ್ಲಿ ಗದಗಿನ ಯೋಧ ಹುತಾತ್ಮ

09:57 AM Dec 27, 2019 | keerthan |

ಗದಗ: ಜಮ್ಮು- ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗದಗ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

Advertisement

ಹೊಳೆಆಲೂರು ಸಮೀಪದ ಕರಮುಡಿ ಗ್ರಾಮದ ಯೋಧ ವೀರೇಶ ಕುರಹಟ್ಟಿ (40) ವೀರಮರಣವನ್ನಪ್ಪಿದ್ದಾರೆ.

ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪೋಸ್ಟಿಂಗ್ ಹಾಕಲಾಗಿತ್ತು. ಡಿ.25ರಂದು ಪಾಕಿಸ್ತಾನದ ಅಪ್ರಚೋದಿತ ದಾಳಿಯಲ್ಲಿ ವೀರೇಶ್ ಕುರಹಟ್ಟಿ ಅವರು ಗುಂಡೇಟಿಗೆ ಒಳಗಾಗಿ, ಕೊನೆಯುಸಿರೆಳೆದರು ಎಂಬ ಮಾಹಿತಿ ಬಂದಿದೆ ಎಂದು ಎಸ್ಪಿ ಶ್ರೀನಾಥ ಜೋಶಿ ತಿಳಿಸಿದ್ದಾರೆ.

ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ದೆಹಲಿಯಿಂದ ಬೆಳಗಾವಿಗೆ ವಿಶೇಷ ವಿಮಾನದ ಮೂಲಕ ಸಾಗಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕರಮುಡಿಗೆ ತರಲಾಗುತ್ತದೆ. ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next