Advertisement

ಸೀತೆ, ಸುಣ್ಣ ಬೀಳಿಸಿದ ತಾಣ

07:46 PM Oct 25, 2019 | Lakshmi GovindaRaju |

ಇದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಸಮೀಪದ ತಾಣ. ಇಲ್ಲಿರುವ ಜಲಪಾತ, ಪೌರಾಣಿಕ ಪ್ರಸಂಗವೊಂದಕ್ಕೆ ಸಾಕ್ಷಿ ಬರೆದಿದೆ. ರಾಮಾಯಣದ ಕಾಲದಲ್ಲಿ, ವನವಾಸದಲ್ಲಿದ್ದಾಗ ಸೀತೆ, ಸುಂದರ ತಪ್ಪಲಿನ ನಡುವೆ ಇರುವ ಈ ಜಲಪಾತದಲ್ಲಿ ಸ್ನಾನ ಮಾಡಿದ್ದಳಂತೆ. ಸ್ನಾನದ ನಂತರ ಇಲ್ಲಿನ ಕಲ್ಲುಬಂಡೆಯ ಮೇಲೆ ವಿರಮಿಸುವಾಗ, ಎಲೆ- ಅಡಕೆ ಹಾಕಿಕೊಂಡು, ಸುಣ್ಣವನ್ನು ಕೆಳಕ್ಕೆ ಬೀಳಿಸಿದ್ದಳು ಎನ್ನುವುದು ಪ್ರತೀತಿ. ಈಗಲೂ ಈ ಜಾಗದಲ್ಲಿ ಯಾವುದೇ ವಸ್ತುವನ್ನು ಬೀಳಿಸಿದರೂ, ಐದಾರು ದಿನಗಳ ಬಳಿಕ ಅವುಗಳ ಮೇಲೆ ಸುಣ್ಣ ಬೆಳೆಯುತ್ತದೆ ಎನ್ನುವ ಮಾತುಗಳುಂಟು. ಪ್ರವಾಸಿಗರು ಇದನ್ನು ಪರೀಕ್ಷಿಸುವ ದೃಶ್ಯಗಳು ಇಲ್ಲಿ ಸಾಮಾನ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next