Advertisement

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

09:54 AM Jul 13, 2020 | sudhir |

ಲಕ್ನೋ/ಕಾನ್ಪುರ: ಎನ್‌ಕೌಂಟರ್‌ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್‌ ದುಬೆ ಹುಟ್ಟೂರಾದ ಕಾನ್ಪುರ ಸಮೀಪದ ಬಿಕ್ರು ಹಳ್ಳಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜು.2ರಂದು ಮಧ್ಯರಾತ್ರಿ ಡಿವೈಎಸ್ಪಿ ಸೇರಿದಂತೆ 8 ಪೊಲೀಸರನ್ನು ಹತ್ಯೆ ಮಾಡ ಲಾಗಿದ್ದ ಜಾಗವನ್ನು ಎಸ್‌ಐಟಿ ಮುಖ್ಯಸ್ಥರಾಗಿರುವ ಸಂಜಯ್‌ ಭೋಸ್‌ರೆಡ್ಡಿ ಮತ್ತಿತರ ಅಧಿಕಾರಿಗಳು ಪರಿಶೀಲನೆ ನಡೆಸಿದರು.

Advertisement

ದುಬೆ ಹತ್ಯೆ, ಆತನ ಅಪರಾಧ ಕೃತ್ಯಗಳ ಸಂಬಂಧ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರವು ಶನಿವಾರ ವಿಶೇಷ ತನಿಖಾ ದಳವನ್ನು ರಚಿಸಿದ್ದು, ಜುಲೈ 31ರೊಳಗೆ ವರದಿಯನ್ನು ಸಲ್ಲಿಸ ಬೇಕಿದೆ. ದುಬೆ ಅಪರಾಧ ಕೃತ್ಯಗಳ ಸಂಬಂಧ ಎಲ್ಲ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ನಡೆಸಲಿದೆ. ಇದೇ ವೇಳೆ ರೌಡಿ ವಿಕಾಸ್‌ ದುಬೆ ಜತೆಗಿದ್ದ ಪೊಲೀಸ್‌ ಪೇದೆಗೆ ಕೋವಿಡ್ ಸೋಂಕು ತಗಲಿರು ವುದು ದೃಢಪಟ್ಟಿದೆ. ಇದೇ ವ್ಯಾನ್‌ನಲ್ಲಿದ್ದ ನಾಲ್ವರು ಪೇದೆಗಳಿಗೆ ನೆಗೆಟಿವ್‌ ಇರುವುದು ಕಂಡು ಬಂದಿದೆ.ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿ ಶೀಟರ್‌ ವಿಕಾಸ್‌ ದುಬೆ ಜತೆ ಪರಾರಿಯಾಗಿದ್ದ ಸಹಚರ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಥಾಣೆಯಲ್ಲಿ ಬಂಧಿಸಿದೆ.

ದಯಾ ನಾಯಕ್‌ ತಂಡದಿಂದ ಬಂಧನ
ದುಬೆಯ ಸಹಚರ ಅರವಿಂದ್‌ ಅಲಿಯಾಸ್‌ ಗುಡ್ಡನ್‌ ರಾಮ್‌ವಿಲಾಸ್‌ ತ್ರಿವೇದಿ (46) ಮತ್ತು ಆತನ ಚಾಲಕ ಸುಶೀಲ್‌ ಕುಮಾರ್‌ ಅಲಿಯಾಸ್‌ ಸೋನು ತಿವಾರಿ (30)ಯನ್ನು ಇನ್‌ಸ್ಪೆಕ್ಟರ್‌ ದಯಾ ನಾಯಕ್‌ ನೇತೃತ್ವದ ಎಟಿಎಸ್‌ ತಂಡವು ಕೋಲ್ಶೆಟ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‌ಪಿ ದೇಶ್‌ಮಾನೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next