Advertisement

ಹುಳು ಬಿದ್ದ ನೀರೇ ಗತಿ: ಆಕ್ರೋಶ

06:10 PM Apr 19, 2020 | Naveen |

ಸಿರುಗುಪ್ಪ: ತಾಲೂಕಿನ ಬಗ್ಗೂರು ಗ್ರಾಮಕ್ಕೆ ಕೆರೆಯಿಂದ ಪೂರೈಕೆ ಮಾಡಿದ ಕುಡಿಯುವ ನೀರಿನಲ್ಲಿ ಹುಳುಗಳು ಕಾಣಿಸಿಕೊಂಡಿದ್ದು ಕೆರೆ ನೀರು ಕುಡಿಯಲು ಯೋಗ್ಯವಿಲ್ಲವೆಂದು ಗ್ರಾಮಸ್ಥರು ಗ್ರಾಮದಿಂದ 5 ಕಿ.ಮೀ. ದೂರದಲ್ಲಿರುವ ರಾರಾವಿ ಕೆರೆಗೆ ಹೋಗಿ ನೀರನ್ನು ತರುತ್ತಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಹುಳುಗಳು ಬಿದ್ದ ನೀರನ್ನು ಬಳಸಲಾಗದೆ ಚೆಲ್ಲುತ್ತಿರುವುದು ಸಾಮಾನ್ಯವಾಗಿದೆ.

ಬಗ್ಗೂರು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೆರೆಯ μಲ್ಟರ್‌ ಬೆಡ್‌ ಗಳನ್ನು ಸ್ವತ್ಛಗೊಳಿಸಲಾಗಿದ್ದು, ಕೆರೆಯಿಂದ ಪೂರೈಕೆಯಾಗುವ ನೀರಿನಲ್ಲಿ ಯಾವುದೇ ಹುಳುಗಳು ಇರುವುದಿಲ್ಲ, ನೀರು ಪೂರೈಕೆಯಾಗುವ ಟ್ಯಾಂಕರ್‌ನಲ್ಲಿ ಏನಾದರೂ ಸ್ವತ್ಛತೆ ಇಲ್ಲದಿರುವುದರಿಂದ ಹುಳುಬಿದ್ದ ನೀರು ಪೂರೈಕೆಯಾಗುತ್ತಿರಬಹುದು. ಆದ್ದರಿಂದ ಗ್ರಾಮಸ್ಥರಿಗೆ ಟ್ಯಾಂಕ್‌ ಸcತ್ಛಗೊಳಿಸಿ ಕುಡಿಯುವ ನೀರೊದಗಿಸಲು ಕ್ರಮ ಕೈಗೊಳ್ಳಲಾಗುವುದು.
ಪಕ್ಕೀರ್‌ಸ್ವಾಮಿ, ಗ್ರಾಮೀಣ
ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ ಜಿಇ

ಕುಡಿಯುವ ನೀರಿನಲ್ಲಿ ಹುಳುಗಳು ಬಿದ್ದಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಮಲ್ಲಿಕಾರ್ಜುನ ಶರ್ಮ, ಪಿಡಿಒ

ಬಗ್ಗೂರು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರೊದಗಿಸಲಾಗುವುದು.
ಹೊಕ್ರಾಣಿ, ಗ್ರಾಮೀಣ
ಕುಡಿಯು ನೀರು ಮತ್ತು ನೈರ್ಮಲ್ಯ
ಇಲಾಖೆ ಎಇಇ

Advertisement
Advertisement

Udayavani is now on Telegram. Click here to join our channel and stay updated with the latest news.

Next