Advertisement

ಸಿಂದಗಿ ಉಪಚುನಾವಣೆ: ಮತದಾನಕ್ಕೆ ಕಾಸರಗೋಡಿನಿಂದ ಬಂದ ಗುಳೆಹೋಗಿದ್ದ ಜನ

12:01 PM Oct 30, 2021 | keerthan |

ವಿಜಯಪುರ: ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

Advertisement

ಗಣಿಹಾರ ಗ್ರಾಮದ 236 ಸಂಖ್ಯೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬೆಳಿಗ್ಗೆ ನೀರಸವಾಗಿದ್ದ ಮತದಾನ 11 ರ ನಂತರ ಬಿರುಸು ಪಡೆಯಿತು.

ಇದನ್ನೂ ಓದಿ:ಹಾನಗಲ್ ಉಪಚುನಾವಣೆ: ಮೂರು ಕಡೆ ಕೈಕೊಟ್ಟ ಮತಯಂತ್ರ

ಗಣಿಹಾರ ಗ್ರಾಮದಲ್ಲಿ ನೂರಾರು ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

Advertisement

ಈ ಗ್ರಾಮದಿಂದ ಕೇರಳ ರಾಜ್ಯಕ್ಕೆ ಗುಳೆಹೋಗಿದ್ದ ಸುಮಾರು ನೂರಾರು ಯುವಕರು ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿ ಮತದಾನ ಮಾಡಿದರು.

ಮತದಾನದ ಹಿನ್ನೆಲೆಯಲ್ಲಿ ಸ್ವಂತ ಖರ್ಚಿನಲ್ಲಿ ಕೇರಳದ ಕಾಸರಗೋಡು ಪಟ್ಟಣದಿಂದ ಆಗಮಿಸಿದ್ದೇನೆ. ಮತದಾನ ಮಾಡುವುದು ನನ್ನ ಕರ್ತವ್ಯ ಸುರೇಶ ಕುಂಬಾರ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next