Advertisement

INDvsENG; ಉಳಿದ ಮೂರು ಪಂದ್ಯಗಳಿಗಿಲ್ಲ ವೈಜಾಗ್ ಪಂದ್ಯವಾಡಿದ್ದ ಭಾರತೀಯ ಬ್ಯಾಟರ್

05:19 PM Feb 09, 2024 | Team Udayavani |

ಮುಂಬೈ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆದ್ದ ಭಾರತ ಸರಣಿ ಸಮಬಲ ಮಾಡಿಕೊಂಡಿದೆ. ರಾಜ್ ಕೋಟ್ ನಲ್ಲಿ ಮೂರನೇ ಪಂದ್ಯ ನಡೆಯಲಿದೆ. ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಿಗೆ ಇನ್ನಷ್ಟೇ ತಂಡ ಪ್ರಕಟವಾಗಬೇಕಿದೆ.

Advertisement

ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯದ ಕಾರಣ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್‌ ಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಅಯ್ಯರ್ ಬ್ಯಾಟಿಂಗ್ ಮಾಡುವಾಗ ಬೆನ್ನು ಮತ್ತು ತೊಡೆಸಂದು ಪ್ರದೇಶದಲ್ಲಿ ನೋವಿನ ಬಗ್ಗೆ ದೂರು ನೀಡಿದ್ದಾರೆ. ಈ ಕಾರಣದಿಂದ ಉಳಿದ ಪಂದ್ಯಗಳನ್ನು ಆಡದಿರಲು ಕಾರಣವಾಗಬಹುದು.

ಭಾರತದ ಎಲ್ಲಾ ಕ್ರಿಕೆಟಿಗರ ಕಿಟ್‌ ಗಳನ್ನು ವಿಶಾಖಪಟ್ಟಣಂನಿಂದ ರಾಜ್‌ಕೋಟ್‌ಗೆ ಕಳುಹಿಸಲಾಗಿದ್ದರೂ, ಅಯ್ಯರ್ ಅವರ ಕಿಟ್ ಗಳನ್ನು ಮುಂಬೈನಲ್ಲಿರುವ ಅವರ ಮನೆಗೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪ್ರಕ್ರಿಯೆಯಲ್ಲಿ ಶ್ರೇಯಸ್ ಅಯ್ಯರ್‌ ತೊಡಗಲಿದ್ದಾರೆ ಎಂದು ವರದಿಯಾಗಿದೆ.

ಅಯ್ಯರ್ ಅವರು ಗಾಯದ ನಂತರ 2023 ರಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Advertisement

ಅಯ್ಯರ್ ಅವರು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತು ಮೆಡಿಕಲ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. 30ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ನಂತರ ಬೆನ್ನು ನೋವು ಕಾಣಿಸುತ್ತದೆ, ಮತ್ತು ಫಾರ್ವರ್ಡ್ ಡಿಫೆನ್ಸ್ ಆಡುವಾಗ ತೊಡೆಸಂದು ನೋವು ಅನುಭವಿಸುತ್ತಾರೆ ”ಎಂದು ಮೂಲವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next