Advertisement

ಶಿವಸೇನೆ ಆತಂಕ ಹೆಚ್ಚಿಸಿದ ರಾಜ್ಯಪಾಲರ ನಡೆ

12:44 AM Apr 26, 2020 | Sriram |

ಮುಂಬಯಿ: ಶಾಸಕ ಅಥವಾ ವಿಧಾನ ಪರಿಷತ್‌ ಸದಸ್ಯರಾಗದೇ ಇರುವ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಅಲ್ಲಿನ ಮಹಾ ವಿಕಾಸ್‌ ಅಘಾಡಿ ಸರಕಾರ ಉಪಾಯ ಕಂಡುಕೊಂಡಿದೆ. ಆದರೆ ಆ ಉಪಾಯಕ್ಕೆ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಸ್ಪಂದಿಸದೆ ಇರುವುದು ಶಿವಸೇನೆಯ ಆತಂಕ ಹೆಚ್ಚಿಸಿದೆ.

Advertisement

ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ, ವಿಧಾನ ಪರಿಷತ್‌ ಚುನಾವಣೆಗೆ ಅವ ಕಾಶವಿಲ್ಲ. ಆದರೆ ರಾಜ್ಯಪಾಲರ ಕೋಟಾದಲ್ಲಿ ವಿಧಾನ ಪರಿಷತ್‌ ಸದಸ್ಯ ರಾಗಲು ಉದ್ಧವ್‌ಗೆ ಅವಕಾಶವಿದೆ. ರಾಜ್ಯಪಾಲರ ಕೋಟಾದಡಿ ಎರಡು ಸದಸ್ಯತ್ವಕ್ಕೆ ಅವಕಾಶವಿದ್ದು, ಅವೆರಡೂ ಸದ್ಯಕ್ಕೆ ಖಾಲಿಯಿವೆ. ರಾಜ್ಯಪಾಲರ ಶಿಫಾರಸಿನ ಮೇಲೆ 1 ಸ್ಥಾನ ತುಂಬಬಹುದಾಗಿದೆ. ಈಗಾಗಲೇ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಎ.9ರಂದು ಕಳುಹಿಸಲಾಗಿರುವ ಮನವಿಗೆ ಅವರು ಸ್ಪಂದಿಸದೇ ಇರುವುದು ಮೈತ್ರಿ ಸರಕಾರಕ್ಕೆ ಆತಂಕ ತಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next