Advertisement

ಶಿರ್ವ: ಚುರುಕುಗೊಂಡ ಭತ್ತದ ನಾಟಿ ಕಾರ್ಯ

11:04 PM Jun 11, 2020 | Sriram |

ಶಿರ್ವ: ಮುಂಗಾರು ಮಳೆಯ ಆರಂಭದೊಂದಿಗೆ ಶಿರ್ವ ನ್ಯಾರ್ಮ ಪರಿಸರದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ಚುರುಕುಗೊಂಡಿದ್ದು ಗುರುವಾರದಿಂದ ನಾಟಿ ಕಾರ್ಯ ಆರಂಭ ಗೊಂಡಿದೆ.

Advertisement

ಶಿರ್ವ ನ್ಯಾರ್ಮ ಮಹಾಲಸಾ ನಾರಾಯಣೀ ದೇವಸ್ಥಾನದ ಗದ್ದೆಯಲ್ಲಿ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ನಾಟಿ ಕಾರ್ಯ ಆರಂಭಗೊಂಡಿದ್ದು ಸುಮಾರು 11 ಮಹಿಳೆಯರಿಂದ ನಾಟಿ ಕಾರ್ಯ ನಡೆಯುತ್ತಿದೆ.

ಜಿಲ್ಲೆಯ ಹೆಚ್ಚಿನೆಡೆ ಕೃಷಿ ಭೂಮಿ ಹಡಿಲು ಬಿದ್ದಿದ್ದರೂ ಸಾಂಪ್ರದಾಯಿಕವಾಗಿ ಸಾವಯವ ಕೃಷಿ ಪದ್ಧತಿಯ ಮೂಲಕ ನೇಜಿ ಸಿದ್ಧಪಡಿಸಿ ವರ್ಷಂಪ್ರತಿ ಭತ್ತದ ಬೇಸಾಯ ಮಾಡುತ್ತಿದ್ದು ಸಮಾಜಸೇವೆಯೊಂದಿಗೆ ಮಾದರಿ ಕೃಷಿಕರಾಗಿ ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಲಾಕ್‌ಡೌನ್‌ ಸಮಯ ಮೇ ತಿಂಗಳಲ್ಲಿ ಭತ್ತದ ಬೀಜ ಬಿತ್ತನೆ ಮಾಡಿದ್ದು ಒಂದು ತಿಂಗಳ ಅನಂತರ ನಾಟಿ ಕಾರ್ಯ ಮಾಡುತ್ತಿದ್ದಾರೆ.ಇವರು ಭತ್ತದ ಕೃಷಿ ಮಾಡಿ ಪರಿಸರದ ದೇವಸ್ಥಾನ, ಚರ್ಚುಗಳಿಗೆ ಕದಿರು ಕಟ್ಟಲು ತೆನೆ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next