Advertisement

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

08:27 PM Dec 06, 2021 | Team Udayavani |

ನವದೆಹಲಿ: ಚಳಿಗಾಲದ ಅಧಿವೇಶನದಿಂದ 12 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಆ ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವವರೆಗೆ ಸಂಸತ್‌ ಟಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

Advertisement

ಸಂಸತ್‌ ಟಿವಿಯಲ್ಲಿ “ಟು ದಿ ಪಾಯಿಂಟ್‌’ ಹೆಸರಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಶಶಿ ತರೂರ್‌, ಕಾರ್ಯಕ್ರಮದಿಂದ ಹೊರಬಂದಿರುವ ಬಗ್ಗೆ ಮಾತನಾಡಿದ್ದು, “ಪ್ರತಿ ದಿನ ನಾನು ಹೋರಾಟನಿರತ ಸಂಸದರನ್ನು ಭೇಟಿ ಮಾಡುತ್ತಿದ್ದೇನೆ.

ಆದರೆ ಅದೇ ವೇಳೆ ಸಂಸತ್‌ ಟಿವಿಯಲ್ಲೂ ಕಾಣಿಸಿಕೊಳ್ಳುವುದರಿಂದ ನಾನು ಸಂಸದೀಯ ಸಂಸ್ಥೆಯ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಸಹಭಾಗಿತ್ವ ಪಡೆದಿದ್ದೇನೆ ಎನಿಸಿಕೊಳ್ಳುತ್ತದೆ.

ಇದನ್ನೂ ಓದಿ:ನಾನು ಸತ್ತರೆ ಮಣ್ಣಿಗೆ ಬರಬೇಡ ಎಂದು ಅಣ್ಣನಿಗೆ ಹೇಳಿದ್ದೇನೆ :ಸಂಸದ ಜಿಗಜಿಣಗಿ

ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಸಂಸದರನ್ನು ಅಧಿವೇಶನಕ್ಕೆ ವಾಪಸು ಕರೆಸಿಕೊಳ್ಳುವವರೆಗೆ ನಾನು ಸಂಸತ್‌ ಟಿವಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next