Advertisement

Bengal; ಬಿಸಿಲ ಬೇಗೆ ಬಗ್ಗೆ ಸುದ್ದಿ ಪ್ರಸ್ತುತಪಡಿಸುತ್ತಿದ್ದ ನಿರೂಪಕಿಯೇ ಅಸ್ವಸ್ಥ!

12:36 AM Apr 22, 2024 | Team Udayavani |

ಕೋಲ್ಕತಾ: ದೇಶದಲ್ಲಿ ಬಿಸಿಲ ಬೇಗೆ ಹೇಗಿದೆ ಅಂದರೆ ಬಿಸಿಲಲ್ಲಿ ನಿಲ್ಲುವುದಷ್ಟೇ ಅಲ್ಲ, ಬಿಸಿಲ ಬಗ್ಗೆ ಮಾತಾಡಿ ದರೂ ಕುಸಿದು ಬೀಳುತ್ತಾರೆ ಎನ್ನುವಂತಾಗಿದೆ. ದೂರ ದರ್ಶನದ ಕೋಲ್ಕತಾ ಶಾಖೆ ನಿರೂಪಕರೊಬ್ಬರು ಬಿಸಿಲ ಬೇಗೆಯ ಸುದ್ದಿ ಓದುತ್ತಿರು ವಾಗಲೇ ಕುಸಿದು ಬಿದ್ದಿರುವ ಘಟನೆ ಇದಕ್ಕೆ ನಿದರ್ಶನ.

Advertisement

ಹೌದು ದೂರದರ್ಶನ ನಿರೂ ಪಕಿ ಲೋಪಮುದ್ರ ಸಿನ್ಹಾ ಸುದ್ದಿ ಪ್ರಸ್ತುತ ಪಡಿಸುತ್ತಿದ್ದ ವೇಳೆ ಕುಸಿದುಬಿದ್ದಿದ್ದಾರೆ. ಮರು ದಿನ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿ ಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಸ್ಟುಡಿಯೋದಲ್ಲಿ ಎಸಿ ಸಮಸ್ಯೆಯಾ ಗಿತ್ತು. ಬೇಗೆಯ ಜತೆಗೆ ರಕ್ತದೊತ್ತಡದಲ್ಲಿ ಏರು ಪೇರಾದ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next