Advertisement

BJP ರಾಜೀವ್‌ ಅವಹೇಳನ ಆರೋಪ: ತರೂರ್‌ಗೆ ಆಯೋಗ ಎಚ್ಚರಿಕೆ

12:58 AM Apr 16, 2024 | Team Udayavani |

ತಿರುವನಂತಪುರ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಬಗ್ಗೆ ಅವಹೇಳನಕಾರಿ ಆರೋಪ ಮಾಡಿದ್ದ ಕಾಂಗ್ರೆಸ್‌ನ ಶಶಿ ತರೂರ್‌ ಅವರಿಗೆ ಚುನಾ ವಣ ಆಯೋಗ ಎಚ್ಚರಿಕೆ ನೀಡಿದೆ.

Advertisement

ಪ್ರತಿಸ್ಪರ್ಧಿ ರಾಜೀವ್‌ ಕುರಿತು ತರೂರ್‌ ಆಡಿರುವ ಮಾತುಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆಯಾಗಿದೆ. ಮುಂದೆ ಈ ರೀತಿಯ ಆಧಾರ ರಹಿತ ಆರೋಪ ಮಾಡಕೂಡದು ಎಂದಿದೆ. ತರೂರ್‌ ನೀಡಿರುವ ಕಾರಣಗಳು ಸಮರ್ಥನೀಯವಲ್ಲ ಎಂದಿರುವ ಆಯೋಗ, ಸಂದರ್ಶನದ ನಿರ್ದಿಷ್ಟ ತುಣುಕನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿದೆ.

ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ತರೂರ್‌, ಹಣ ಹಂಚಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ರಾಜೀವ್‌ರ ಹೆಸರು ಉಲ್ಲೇಖಸಿ ಆರೋಪ ಮಾಡಿ ದ್ದರು. ಈ ಬಗ್ಗೆ ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next