Advertisement

Defamation: ಮಾನಹಾನಿ ಹೇಳಿಕೆ: ತರೂರ್‌ ವಿರುದ್ಧ ಸಚಿವ ರಾಜೀವ್‌ ನೋಟಿಸ್‌

11:19 PM Apr 10, 2024 | Team Udayavani |

ತಿರುವನಂತಪುರ: ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಕಾಂಗೆಸ್‌ ನಾಯಕ ಶಶಿ ತರೂರ್‌ಗೆ ಕಾನೂನು ನೋಟಿಸ್‌ ನೀಡಿದ್ದಾರೆ.

Advertisement

ರಾಜೀವ್‌ ಚಂದ್ರಶೇಖರ್‌ ಮತಗಳನ್ನು ಸೆಳೆಯುವುದಕ್ಕಾಗಿ ಪ್ರಮುಖ ವ್ಯಕ್ತಿಗಳು ಹಾಗೂ ಪಾದ್ರಿಗಳಂಥ ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ತರೂರ್‌ ಹೇಳಿಕೆ ನೀಡಿದ್ದು ಎಂದು ಆರೋಪಿಸಲಾಗಿದೆ.

ನೋಟಿಸ್‌ನಲ್ಲಿ ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ. ಜತೆಗೆ ಚುನಾವಣೆಯಲ್ಲಿ ಪ್ರಭಾವ ಬೀರುವುದೇ ಉದ್ದೇಶವಾಗಿದೆ. ಹೀಗಾಗಿ, ತರೂರ್‌ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next