Advertisement

ಸವಣೂರಿನ ಚರಂಡಿ ಸಮಸ್ಯೆಗೆ ಕೊನೆಗೂ ಮುಕ್ತಿ

12:31 PM Apr 02, 2018 | Team Udayavani |

ಸವಣೂರು: ಮಳೆಗಾಲದಲ್ಲಿ ಸವಣೂರಿನ ನಾಗರಿಕರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಚರಂಡಿ ಸಮಸ್ಯೆಗೆ ಈ ಬಾರಿ ಮುಕ್ತಿ ಸಿಗಲಿದೆ. ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಕಾಮಗಾರಿ ನಡೆಯುತ್ತಿದೆ.

Advertisement

ಚರಂಡಿ ನಿರ್ಮಾಣಕ್ಕೆ 2 ವರ್ಷಗಳ ಹಿಂದೆ ಇಲಾಖೆ ಮುಂದಾಗಿತ್ತು. ಇದಕ್ಕಾಗಿ ಖಾಸಗಿ ಕಟ್ಟಡಕ್ಕೆ ತೆರಳಲು ಇದ್ದ ದಾರಿ ಅಗೆಯಲಾಗಿತ್ತು.ಇದರಿಂದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಸಮಸ್ಯೆ ಉಂಟಾಗಿತ್ತು. ನಂತರ ದಿನಗಳಲ್ಲಿ ತಕ್ಕಮಟ್ಟಿಗೆ ದುರಸ್ತಿ ಮಾಡಿತ್ತು.ಆದರೆ ಮೋರಿಯಲ್ಲಿ ತುಂಬಿದ ಮಣ್ಣನ್ನು ಹಾಗೇ ಬಿಡಲಾಗಿದ್ದು, ನಾಮ್‌ ಕೆವಾಸ್ತೆ ದುರಸ್ತಿ ಮಾಡಿದ್ದರು. ಇದರಿಂದ ಮಳೆನೀರು ಮೋರಿಯಲ್ಲಿ ಹೋಗದೇ ರಸ್ತೆಯಲ್ಲಿ ಹರಿಯುತ್ತಿತ್ತು. ಜತೆಗೆ ರಸ್ತೆ ಬದಿ ನಿಂತವರಿಗೆ ಕೆಸರು ನೀರಿನ ಸಿಂಚನವೂ ಆಗುತ್ತಿತ್ತು.

ರಸ್ತೆ ಅಗಲೀಕರಣ ಸಂದರ್ಭ ಮಾಡಿದ ಚರಂಡಿಯನ್ನು ಸರಿಯಾಗಿ ನಿರ್ಮಾಣ ಮಾಡದ್ದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿತ್ತು ಜನತೆಗೆ ಸೊಳ್ಳೆ ಉತ್ಪಾದನಾ ಕೇಂದ್ರವೂ ಆಗಿತ್ತು. ಪ್ರತಿ ಮಳೆಗಾಲದಲ್ಲಿ ಇದೊಂದು ಸಮಸ್ಯೆ ಕಾಡುತ್ತಲೇ ಇತ್ತು. ಈ ಬಗ್ಗೆ ಸಾರ್ವಜನಿಕರು ಇಲಾಖೆಯನ್ನು ಕಾಮಗಾರಿಗೆ ಒತ್ತಾಯಿಸುತ್ತಲೇ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next