Advertisement

ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ

11:28 PM Jan 29, 2020 | Lakshmi GovindaRaj |

ಬೆಂಗಳೂರು: ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ 18 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿರುವ ಪಕ್ಷ, ಇದೀಗ 12 ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರ ಆಯ್ಕೆ ಪೂರ್ಣಗೊಳಿಸಿದೆ.

Advertisement

ಮೈಸೂರು ನಗರಕ್ಕೆ ಶ್ರೀವತ್ಸ, ಮೈಸೂರು ಗ್ರಾಮಾಂತರಕ್ಕೆ ಎಸ್‌.ಡಿ.ಮಹೇಂದ್ರ, ಚಾಮರಾಜನಗರಕ್ಕೆ ಆರ್‌.ಸುಂದರ್‌, ಉಡುಪಿಗೆ ಕುಯಾಡಿ ಸುರೇಶ್‌ ನಾಯಕ್‌, ಉತ್ತರ ಕನ್ನಡಕ್ಕೆ ವೆಂಕಟೇಶ ನಾಯಕ್‌, ಬಾಗಲಕೋಟೆಗೆ ಶಾಂತಪ್ಪಗೌಡ ತೀರ್ಥಪ್ಪಗೌಡ ಪಾಟೀಲ್‌, ರಾಯಚೂರಿಗೆ ರಮಾನಂದ ಯಾದವ್‌, ಬಳ್ಳಾರಿಗೆ ಚನ್ನಬಸವನಗೌಡ ಪಾಟೀಲ್‌,

ದಾವಣಗೆರೆಗೆ ವೀರೇಶ್‌ ಹನಗವಾಡಿ, ಬೆಂಗಳೂರು ಗ್ರಾಮಾಂತರಕ್ಕೆ ಎ.ವಿ.ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರಕ್ಕೆ ಜಿ.ಮಂಜುನಾಥ್‌ ಹಾಗೂ ಬೆಂಗಳೂರು ದಕ್ಷಿಣಕ್ಕೆ ಎನ್‌.ಆರ್‌.ರಮೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next