Advertisement

ರಾಷ್ಟ್ರಪತಿ ಭೇಟಿ ವೇಳೆ ಭದ್ರತಾ ಲೋಪ

12:03 AM Dec 25, 2021 | Team Udayavani |

ತಿರುವನಂತಪುರ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನಗರದಲ್ಲಿ ಕಾರ್ಯಕ್ರಮಕ್ಕೆ ತೆರಳುವ ವೇಳೆ ಭದ್ರತಾ ಲೋಪ ಉಂಟಾಗಿದೆ. ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸಲಿವೆ.

Advertisement

ಹಿರಿಯ ಮುಖಂಡ ಪಿ.ಎನ್‌. ಪಣಿಕರ್‌ ಪುತ್ಥಳಿಯನ್ನು ಅನಾವರಣ ಮಾಡಲೆಂದು ರಾಷ್ಟ್ರಪತಿ ಕೋವಿಂದ್‌ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆ ವೇಳೆ ಕೇರಳ ಮೇಯರ್‌ ಆರ್ಯ ರಾಜೇಂದ್ರನ್‌ ಅವರ ಕಾರು ಕೂಡ ರಾಷ್ಟ್ರಪತಿಗಳ ಕಾರು ಮತ್ತು ಬೆಂಗಾವಲು ಪಡೆಯ ಜತೆಗೆ ತೆರಳಲು ಮುಂದಾಗಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ:ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ಭರ್ತಿಗೆ ಕ್ರಮ: ಬಿ.ಸಿ.ಪಾಟೀಲ್‌

ಆದರೆ ಈ ಅಂಶವನ್ನು ಮೇಯರ್‌ ಕಚೇರಿ ನಿರಾಕರಿಸಿದೆ. ಇದರ ಜತೆಗೆ ರಾಷ್ಟ್ರಪತಿ ಕಾರ್ಯ ಕ್ರಮಕ್ಕೆ ತೆರಳಿದ್ದ ಸ್ಥಳದಲ್ಲಿ ಅವರಿಗೆ ವಿಶ್ರಾಂತಿ ಪಡೆಯಲು ನೀಡಲಾಗಿದ್ದ ಕೊಠ ಡಿಯ ಶೌಚಾಲಯದಲ್ಲಿ ನೀರಿನ ಸಂಪರ್ಕ ಸರಿಯಾಗಿರಲಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ತನಿಖೆಗೆ ನಡೆಯಲಿದೆ.

ಈ ಅಂಶದ ಬಗ್ಗೆ ಕೇರಳ ಬಿಜೆಪಿ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next