Advertisement

Scenario of Narcotics: ʼಅಕ್ರಮ ಮಾದಕ ಪದಾರ್ಥ ಭಾರತಕ್ಕೆ ಮಾತ್ರವಲ್ಲ, ಜಾಗತಿಕ ಸಮಸ್ಯೆʼ

08:11 PM Aug 25, 2024 | Team Udayavani |

ರಾಯಪುರ (ಛತ್ತೀಸ್‌ಗಢ): ಅಕ್ರಮ ಮಾದಕ ಪದಾರ್ಥಗಳ ವ್ಯಾಪಾರವು ಭಾರತಕ್ಕೆ ಮಾತ್ರ ಸವಾಲು ಅಲ್ಲ, ಜಾಗತಿಕ ಸಮಸ್ಯೆಯೂ ಆಗಿದೆ. ದೇಶವು ದೃಢ ಸಂಕಲ್ಪ ಮತ್ತು ಕಾರ್ಯತಂತ್ರದೊಂದಿಗೆ ಈ ಅಪಾಯದ ವಿರುದ್ಧ ಹೋರಾಡಬೇಕಾದ  ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.

Advertisement

ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಭಾನುವಾರ ಮಾದಕ ಪದಾರ್ಥಗಳ ಸನ್ನಿವೇಶ ಕುರಿತು ನಡೆದ ಸಮಾವೇಶ ಸಭೆಯಲ್ಲಿ ಮಾತನಾಡಿ,  ಮಾದಕ ಪದಾರ್ಥಗಳ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಲು ನಾಲ್ಕು ಸೂತ್ರಗಳ ಅಳವಡಿಸಬೇಕಾಗಿದೆ ಅವುಗಳು ಯಾವುದೆಂದರೆ  “ಮಾದಕ ವಸ್ತುಗಳ ಪತ್ತೆ, ಸಂಪರ್ಕ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ”ಯಂತಹ ಕ್ರಮಗಳ  ಅಳವಡಿಸಿಕೊಳ್ಳುವುದರಿಂದ ಮಾದಕ ಪದಾರ್ಥಗಳ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು  ಸಾಧ್ಯ ಎಂದು ಹೇಳಿದರು.

“2047ರಲ್ಲಿ ದೇಶವು ಸ್ವಾತಂತ್ರ್ಯಗಳಿಸಿ 100 ವರ್ಷ ಆಚರಿಸುವ ವೇಳೆಗೆ ಭಾರತದಲ್ಲಿ ಮಾದಕ ದ್ರವ್ಯ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆಗೈದಿದ್ದಾರೆ. ಕ್ರಮೇಣ ಈ ನಿರ್ಣಯವು 140 ಕೋಟಿ ಜನರ ನಿರ್ಣಯವಾಗಿದೆ. ಸಮೃದ್ಧ, ಸುರಕ್ಷಿತ ಮತ್ತು ವೈಭವಯುತ ಭಾರತ ಆಗುವಲ್ಲಿ ಮಾದಕ ದ್ರವ್ಯ ಮುಕ್ತ ಭಾರತದ ನಿರ್ಣಯವು ಬಹಳ ಮುಖ್ಯ ಎಂದು ಹೇಳಿದರು.

ಯುವಕರ ಗುರಿಯಾಗಿಸಿ ಅವರ ನಾಶಪಡಿಸುವ ಜೊತೆಗೆ ಅಕ್ರಮ ಮಾದಕ ದ್ರವ್ಯಗಳ ವ್ಯಾಪಾರದಿಂದ ಬಂದ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೂ ಬಳಸಲಾಗುತ್ತಿದೆ. ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸುವುದು ಅದರ ವಿರುದ್ಧ ಶೂನ್ಯ ಸಹಿಷ್ಣುತೆಯಿಂದ ಇರುವುದು ದೇಶದ ಜವಾಬ್ದಾರಿಯಾಗಿದೆ”. ಛತ್ತೀಸ್‌ಗಢದಲ್ಲೂ  ಮಾದಕ ವಸ್ತುಗಳ ಬಳಕೆಯ ಬಗ್ಗೆಯೂ ಶಾ ಕಳವಳ ವ್ಯಕ್ತಪಡಿಸಿದರು.

Advertisement

ಛತ್ತೀಸ್‌ಗಢವು ಒಡಿಶಾ ಮತ್ತು ಆಂಧ್ರಪ್ರದೇಶ ಸೇರಿದಂತೆ ಏಳು ರಾಜ್ಯಗಳೊಂದಿಗೆ ಗಡಿಯ ಹಂಚಿಕೊಂಡಿದ್ದು, ಅಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡಲಾಗುತ್ತದೆ. ಛತ್ತೀಸ್‌ಗಢ ರಾಜ್ಯವೊಂದರಲ್ಲೇ  4.98 ಶೇಕಡಾ ಗಾಂಜಾ ಬಳಕೆ ವರದಿಯಾಗಿದೆ, ಇದು ರಾಷ್ಟ್ರೀಯ ಸರಾಸರಿ 2.83 ಶೇಕಡಾಕ್ಕಿಂತ ಹೆಚ್ಚಿದ್ದು  ಇದು ಕಳವಳಕಾರಿ ವಿಷಯ ಎಂದು ಹೇಳಿದರು.

ಛತ್ತೀಸ್‌ಗಢಕ್ಕೆ  3 ದಿನಗಳ ಪ್ರವಾಸದಲ್ಲಿರುವ  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಸಮಾವೇಶಕ್ಕೂ ಮೊದಲು ನವ ರಾಯಪುರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ಕಚೇರಿಯ ವರ್ಚ್ಯುವಲ್‌ ಮೂಲಕ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next