Advertisement

ಕೋವಿಡ್ 19 ಸೋಂಕು ತಡೆಗೆ ಸರ್ವಧರ್ಮಗಳ ಗುರುಗಳಿಂದ ಜಾಗೃತಿ ಸಭೆ

01:53 PM Apr 12, 2020 | keerthan |

ರಾಯಚೂರು : ಕೊವಿಡ್-19 ವೈರಸ್ ಹರಡದಂತೆ ಮುನ್ನೆಚರಿಕಾ ಕ್ರಮ ಕೈಗೊಳ್ಳುವ ಕುರಿತು ನಗರದ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಸರ್ವಧರ್ಮಗಳ ಗುರುಗಳಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಹಿಂದು, ಕ್ರೈಸ್ತ ಹಾಗು ಮುಸ್ಲಿಂ ಧರ್ಮಗಳ 15 ಕ್ಕು ಹೆಚ್ಚು ಗುರುಗಳು ಪಾಲ್ಗೊಂಡಿದ್ದರು. ಎಲ್ಲ ಗುರುಗಳು ಮಾತನಾಡಿ, ಭಕ್ತರು ಮಠ ಮಂದಿರ ಮಸೀದಿ ಚರ್ಚ್ ಗಳಿಗೆ ಹೋಗದೆ ಮನೆಯಲ್ಲಿ ದೇವರ ಧ್ಯಾನ ಮಾಡಬೇಕು. ಜಾತಿ ಧರ್ಮಗಳನ್ನು ಮೀರಿ ಒಗ್ಗೂಡಿ ಹೋರಾಡಬೇಕಿದೆ ಎಂದರು.

ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಧರ್ಮಗುರುಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಕೋವಿಡ್-19 ಸೋಂಕು ಈಗಿನ್ನೂ ಹುಟ್ಟಿದ ಮಗು. ಅದು ಮುಂದೆ ದೊಡ್ಢದಾಗಿ ಬೆಳೆಯದಂತೆ ನೋಡಿಕೊಳ್ಳಬೇಕಿದೆ. ಧರ್ಮಗುರುಗಳು ನಿಮ್ಮ ಅನುಯಾಯಿಗಳಿಗೆ ಕರೆ ನೀಡಿ ಮನೆಯಲ್ಲಿರುವಂತೆ ಸಂದೇಶ ನೀಡಬೇಕಿದೆ. ಮುಂದಿನ ಎರಡು ವಾರ ಭಾರತಕ್ಕೆ ಬಲು ಕಠಿಣವಾಗಿರಲಿದೆ. ಅದಕ್ಕೆ ಎಲ್ಲರೂ ಮನೆಯಲ್ಲಿದ್ದು ಸಹಕರಿಸಬೇಕು. ಜನರಿಗೆ ಏನು ಬೇಕು ಎಲ್ಲ ಸೌಲಭ್ಯವನ್ನು ಮನೆಗೆ ತಲುಪಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next