Advertisement

ಕೆಜಿಎಫ್-2 ಶೂಟಿಂಗ್ ಸೆಟ್ ಗೆ ‘ಅಧೀರನ’ ಎಂಟ್ರಿ: ಪ್ರಶಾಂತ್ ನೀಲ್ ಹೇಳಿದ್ದೇನು ?

01:46 PM Nov 29, 2020 | Adarsha |

ಹೈದರಾಬಾದ್: ಇತ್ತೀಚಿಗಷ್ಟೇ ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಡಿ ವಿಜಯ ಸಾಧಿಸಿರುವ ಬಾಲಿವುಡ್ ಖ್ಯಾತ ನಟ ಸಂಜಯ್ ದತ್, ಇದೀಗ ಕನ್ನಡದ ಬಹುನೀರೀಕ್ಷಿತ ಸಿನಿಮಾ ಕೆ.ಜಿ.ಎಫ್- 2 ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಕೆ.ಜಿ.ಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಇದೀಗ ಕೆ.ಜಿ.ಎಫ್-2 ಚಿತ್ರೀಕರಣ ಕೂಡಾ ಬಹುಪಾಲು ಮುಗಿದಿದ್ದು, ಈ ಚಿತ್ರದಲ್ಲಿ ನಟ ಯಶ್ ಗೆ ಎದುರಾಳಿಯಾಗಿ ಸಂಜಯ್ ದತ್  ಅಧೀರನ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ:2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ

ಸಂಜಯ್  ದತ್ ಪಾತ್ರಕ್ಕೆ ಸಂಬಂಧಿಸಿದಂತೆ ಬಹುಪಾಲು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಕೇವಲ ಹತ್ತು ದಿನಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಮುಂದಿನ ಸೋಮವಾರ (ನವೆಂಬರ್ -30) ದಿಂದ ಚಿತ್ರೀಕರಣ  ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.

ಸಂಜಯ್ ದತ್ ಅವರ ಪಾತ್ರವು ‘ವೈಕಿಂಗ್ಸ್ ಸೀರೀಸ್’ ನ ಭಯಾನಕ ಪಾತ್ರಗಳಿಂದ ಪ್ರೇರಿತವಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಕಳೆದ  ಅಕ್ಟೋಬರ್ ನಲ್ಲಿಯೇ ಕೆಜಿಎಫ್-2 ಚಿತ್ರ ಬಿಡುಗಡೆಗೊಳ್ಳಬೇಕಾಗಿತ್ತು. ಆದರೇ ಕೋವಿಡ್ ಕಾರಣದಿಂದ ಚಿತ್ರೀಕರಣ ವಿಳಂಬವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next