Advertisement

Sandalwood: ಸುದೀಪ್‌ – ಸಂದೇಶ್‌ ನಾಗರಾಜ್‌ ಚಿತ್ರಕ್ಕೆ ಹೇಮಂತ್‌ ರಾವ್‌ ಆ್ಯಕ್ಷನ್ ಕಟ್?

01:56 PM Jun 01, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ ಸದ್ಯ ʼಮ್ಯಾಕ್ಸ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಕೂಡ ಕಿಚ್ಚ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸದಲ್ಲಿ ನಿರತರಾಗಲಿದ್ದಾರೆ. ಈ ನಡುವೆ ಖ್ಯಾತ ನಿರ್ಮಾಪಕರೊಬ್ಬರು ಕಿಚ್ಚನನ್ನು ಭೇಟಿ ಆಗಿದ್ದಾರೆ.

Advertisement

ಇತ್ತೀಚೆಗಷ್ಟೇ ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಕಿಚ್ಚ ಸುದೀಪ್‌ ಅವರ ಮನೆಗೆ ತೆರಳಿ ಅವರನ್ನು ಭೇಟಿ ಆಗಿದ್ದಾರೆ. ಈ ಹಿಂದೆ ಸಂದೇಶ್‌ ನಾಗರಾಜ್ ಸುದೀಪ್‌ ಅವರನ್ನು ಚೆನ್ನೈನಲ್ಲಿ ಭೇಟಿ ಆಗಿದ್ದರು. ಆ ಮೂಲಕ ಕಿಚ್ಚ ಅವರೊಂದಿಗೆ ಸಿನಿಮಾ ಮಾಡಲಿದ್ದೇವೆ ಎನ್ನುವ ಬಗ್ಗೆ ಸುಳಿವು ನೀಡಿದ್ದರು.

ಇದೀಗ ಈ ಸುದ್ದಿ ಅಧಕೃತವಾಗಿದ್ದು, ಶೀಘ್ರದಲ್ಲಿ ಒಳ್ಳೆಯ ಸುದ್ದಿಯೊಂದು ಬರಲಿದೆ ಜಸ್ಟ್‌ ವೇಟ್‌ & ವಾಚ್‌ ಎಂದು ಸಂದೇಶ್‌ ಇನ್ಸ್ಟಾದಲ್ಲಿ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್:‌ ಏನಿದು ಲೆಕ್ಕಚಾರ?

ಕಿಚ್ಚ ಅವರೊಂದಿಗೆ ಮಾಡುತ್ತಿರುವುದು ಅಧಿಕೃತವಾಗಿದ್ದು, ನಿರ್ದೇಶನ ಯಾರು ಮಾಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ.

Advertisement

“ಸುದೀಪ್‌ ಅವರನ್ನು ನಿರ್ದೇಶನ ಮಾಡುವ ಬಗ್ಗೆ ಹೇಮಂತ್‌ ರಾವ್‌ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಮೊದಲು ನಾವು ವಿವರಗಳನ್ನು ಅಂತಿಮಗೊಳಿಸಬೇಕಾಗಿದೆ. ಸುದೀಪ್‌ – ಹೇಮಂತ್‌ ಕಾಂಬಿನೇಷನ್‌ ಬಗ್ಗೆ ಇನ್ನಷ್ಟೇ ಆರಂಭಿಕವಾಗಿ ಮಾತುಕತೆ ನಡೆದಿದೆ” ಎಂದು ಸಂದೇಶ್‌  ನಾಗರಾಜ್‌ ಹೇಳಿರುವುದಾಗಿ ʼಸಿನಿಮಾ ಎಕ್ಸ್ ಪ್ರೆಸ್‌ʼ ವರದಿ ತಿಳಿಸಿದೆ.

ಸದ್ಯ ಹೇಮಂತ್‌ ಶೀವರಾಜ್‌ ಕುಮಾರ್‌ ಅವರಿಗಾಗಿ ಸ್ಕ್ರಿಪ್ಟ್‌ ಬರೆಯುತ್ತಿದ್ದಾರೆ. ಇತ್ತ ಸುದೀಪ್‌ ʼಮ್ಯಾಕ್ಸ್‌ʼ ಬಳಿಕ ʼಚೇರನ್‌ʼ ಸಿನಿಮಾದಲ್ಲಿ  ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಇದಾದ ನಂತ ಅನೂಪ್‌ ಭಂಡಾರಿ ಅವರ ʼಬಿಲ್ಲಾ ರಂಗ ಬಾಷಾʼ ದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರ ಕೆಆರ್‌ ಜಿ ಅವರ ಪ್ರಾಜೆಕ್ಟ್‌ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next