Advertisement

4 ವರ್ಷದ ಬಳಿಕ ಕ್ರಿಕೆಟ್‌  ಆಡಿದ ಎಸ್‌. ಶ್ರೀಶಾಂತ್‌

11:23 AM Aug 16, 2017 | Team Udayavani |

ಕೊಚ್ಚಿ: ಎಸ್‌. ಶ್ರೀಶಾಂತ್‌ 4 ವರ್ಷಗಳ ಬಳಿಕ ಮೊದಲ ಬಾರಿಗೆ ಕ್ರಿಕೆಟ್‌ ಆಡಿದ್ದಾರೆ. ಸ್ವಾತಂತ್ರ್ಯ ದಿನದ ಸಂಭ್ರಮದ ವೇಳೆ ಮಂಗಳ ವಾರ ಕೊಚ್ಚಿಯಲ್ಲಿ ಸಿಂಗರ್ ಇಲೆವೆನ್‌ ತಂಡದ ಪರ ಆಡಿದರು. ಅಷ್ಟೇ ಅಲ್ಲ, ಪ್ರೊಡ್ಯುಸರ್ ಇಲೆವೆನ್‌ ತಂಡದ ವಿರುದ್ಧ ನಾಯಕರಾಗಿ ತಂಡವನ್ನು ಮುನ್ನಡೆಸಿದರು. 

Advertisement

ಪಂದ್ಯದ ಬಳಿಕ ಶ್ರೀಶಾಂತ್‌ ಮಾತನಾಡಿದ ಶ್ರೀಶಾಂತ್‌, “ಮತ್ತೆ ಕ್ರಿಕೆಟ್‌ ಆಡಿರುವುದು ಸಂತಸದ ವಿಷಯ. ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ’ ಎಂದರು. 2013ರಲ್ಲಿ ಶ್ರೀಶಾಂತ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು ಮೊದಲು ಜೈಲು ಶಿಕ್ಷೆ ಅನುಭವಿಸಿದ್ದರು. ಅನಂತರ ಅವರನ್ನು ಬಿಸಿಸಿಐ ಆಜೀವ ನಿಷೇಧಗೊಳಿಸಿತ್ತು. ಕಳೆದ ವರ್ಷ ದಿಲ್ಲಿ ಅಧೀನ ನ್ಯಾಯಾಲಯ ಇವರನ್ನು ನಿರಪರಾಧಿ ಎಂದು ಘೋಷಿಸಿತ್ತು. ಆ ಬಳಿಕವೂ ಬಿಸಿಸಿಐ ಇವರನ್ನು ನಿರಪರಾಧಿ ಎಂದು ಪರಿಗಣಿಸಿರಲಿಲ್ಲ. ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರಲಿಲ್ಲ. 

ಇದನ್ನು ಕೇರಳ ಹೈಕೋರ್ಟ್‌ನಲ್ಲಿ ಶ್ರೀಶಾಂತ್‌ ಪ್ರಶ್ನಿಸಿದ್ದರು. ಈಗ ಕೇರಳ ಹೈಕೋರ್ಟ್‌ ಇವರನ್ನು ದೋಷಮುಕ್ತರನ್ನಾಗಿ ಮಾಡಿದ್ದರೂ ಬಿಸಿಸಿಐ ಮಾತ್ರ ಇವರ ಶಿಕ್ಷೆಯನ್ನು ಇನ್ನೂ ತೆರವುಗೊಳಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next