Advertisement

ರಾಹುಲ್‌ಗೆ ಆಹ್ವಾನ? ಕಾರ್ಯಕ್ರಮಕ್ಕೆ ಕರೆಯಲು ಆರ್‌ಎಸ್‌ಎಸ್‌ ಚಿಂತನೆ

06:00 AM Aug 28, 2018 | Team Udayavani |

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇತ್ತೀಚೆಗೆ ತೀವ್ರ ಟೀಕೆ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ತನ್ನ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಸಂಘ ಚಿಂತನೆ ನಡೆಸಿದೆ ಎನ್ನಲಾಗಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಸೆಪ್ಟೆಂಬರ್‌ 17ರಿಂದ 19ರ ವರೆಗೆ ನಡೆಯಲಿರುವ ವಿಚಾರ ಸಂಕಿರಣಕ್ಕೆ ಅವರನ್ನು ಆಹ್ವಾನಿಸುವ ಸಾಧ್ಯತೆಯಿದೆ. ಈ ಹಿಂದೆ ಆರೆಸ್ಸೆಸ್‌ನ ವಾರ್ಷಿಕ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯನ್ನು ಆಹ್ವಾನಿಸಿದ್ದು, ಕಾಂಗ್ರೆಸ್‌ಗೆ ಭಾರೀ ಮುಜುಗರ ತಂದಿತ್ತು. 

Advertisement

ರಾಹುಲ್‌ ಜತೆಗೆ ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ ಸೇರಿ ಹಲವು ಮುಖಂಡರು ಈ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಸಾಧ್ಯತೆಯಿದೆ. ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವ ವ್ಯಕ್ತಿ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾ ಗಿದೆ. ಕಾರ್ಯ
ಕ್ರಮದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ “ಭಾರತದ ಭವಿಷ್ಯದ ಬಗ್ಗೆ ಆರೆಸ್ಸೆಸ್‌ ದೃಷ್ಟಿಕೋನ’ ಎಂಬ ವಿಚಾ ರದ ಬಗ್ಗೆ ಮಾತನಾಡಲಿದ್ದಾರೆಂದು ಪ್ರಚಾರ ಪ್ರಮುಖ್‌ ಅರುಣ್‌ ಕುಮಾರ್‌ ಹೇಳಿದ್ದಾರೆ. ನಾಗ್ಪುರ ಕಾರ್ಯಕ್ರಮ ದಲ್ಲಿ ಪ್ರಣಬ್‌ ಮುಖರ್ಜಿ ಭಾಗವಹಿ ಸಿದ್ದ ಬಗ್ಗೆ ರಾಹುಲ್‌ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ, ಪಕ್ಷದ ಹಲವು ಮುಖಂಡರು ವಿರೋಧಿಸಿದ್ದರು.

ಇತ್ತೀಚೆಗೆ ಆರೆಸ್ಸೆಸ್‌ ವಿರುದ್ಧ ರಾಹುಲ್‌ ತೀವ್ರ ಟೀಕೆ ನಡೆಸುತ್ತಿರುವುದೂ ಕೂಡ ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಆರೆಸ್ಸೆಸ್‌ ಪರಿಗಣಿಸಲು ಕಾರಣ ಎಂದೂ ಹೇಳಲಾಗಿದೆ. ಆದರೆ ಈವರೆಗೂ ಕಾರ್ಯ ಕ್ರಮದಲ್ಲಿ ಯಾರು ಭಾಗವಹಿಸಲಿ ದ್ದಾರೆ ಎಂಬ ವಿವರಗಳನ್ನು ಸಂಘ ಇನ್ನೂ ಪ್ರಕಟಿಸಿಲ್ಲ. ಪಟ್ಟಿಯನ್ನು ಇನ್ನಷ್ಟೇ ಅಂತಿಮ ಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಹುಲ್‌ಗೆ ಭಾರತದ ಬಗ್ಗೆ ಜ್ಞಾನವಿಲ್ಲ
ಲಂಡನ್‌ನಲ್ಲಿ ಮುಸ್ಲಿಂ ಬ್ರದರ್‌ಹುಡ್‌ ಜತೆ ಆರೆಸ್ಸೆಸ್‌ ಸಿದ್ಧಾಂತ ಹೋಲಿಕೆ ಮಾಡಿದ್ದ ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್‌, ರಾಹುಲ್‌ಗೆ ಭಾರತದ ಬಗ್ಗೆ ಅರಿವಿಲ್ಲ. ಹೀಗಾಗಿ ಸಂಘದ ಬಗ್ಗೆ ತಿಳಿದುಕೊಳ್ಳಲೂ ಅವರಿಂದ ಸಾಧ್ಯವಿಲ್ಲ ಎಂದಿದೆ. ಇಡೀ ದೇಶ ಇಂದು ಇಸ್ಲಾಮಿಕ್‌ ಮೂಲಭೂತವಾದದ ಭೀತಿಯನ್ನು ಎದುರಿಸುತ್ತಿದೆ. ಈ ಸನ್ನಿವೇಶದ ತೀವ್ರತೆಯ ಬಗ್ಗೆ ರಾಹುಲ್‌ಗೆ ತಿಳಿದಿಲ್ಲ ಎಂದು ಆರೆಸ್ಸೆಸ್‌ ಪ್ರಚಾರ ಪ್ರಮುಖ್‌ ಅರುಣ್‌ ಕುಮಾರ್‌ ಹೇಳಿದ್ದಾರೆ. ಭಾರತವನ್ನು ಅರ್ಥ ಮಾಡಿಕೊಳ್ಳದ ಹೊರತು, ರಾಹುಲ್‌ಗೆ ಸಂಘದ ಸಿದ್ಧಾಂತ ಅರ್ಥವಾಗದು ಎಂದು ಅರುಣ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next