Advertisement

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

11:41 PM May 27, 2024 | Team Udayavani |

ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೋಟೆಸಾರು ನರ್ಸರಿ ಬಳಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಹನ್ನೆರಡು 12 ಮಂದಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.

Advertisement

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬೆದ್ರುಮಾರ್‌ ನಿವಾಸಿ ದೀಕ್ಷಿತ್‌ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಕ್ಷಿತ್‌ ದೂರಿನ ಪ್ರಕಾರ ಆತ ತನ್ನ ಟಾಟಾ ಸುಮೋ ಕಾರಿನಲ್ಲಿ ಧರ್ಮಸ್ಥಳದಿಂದ ಬಾಡಿಗೆ ನಿಮಿತ್ತ ಯಾತ್ರಾರ್ಥಿಗಳನ್ನು ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿ ವಾಪಸು ಧರ್ಮಸ್ಥಳಕ್ಕೆ ಹೋಗುತ್ತಿರುವಾಗ ಬಿಳಿನೆಲೆಯ ಕೋಟೆಸಾರು ನರ್ಸರಿ ಎನ್ನುಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿದೆ. ಟಾಟಾ ಸುಮೋದಲ್ಲಿದ್ದ ಲಂಕೇಶ್‌ ಕುಮಾರ್‌, ಸ್ವರ್ಣತಲಾ, ಅಶ್ವಿ‌ನಿ, ನಂದಿನಿ ಅವರಿಗೆ ಗಾಯಗಳಾಗಿವೆ. ಇನ್ನೊಂದು ಕಾರಿನಲ್ಲಿದ್ದ ಚಾಲಕ ಕುಂಬ್ಳೆ ಮೂಲದ ನಾರಾಯಣ ನಾಯ್ಕ, ಪ್ರಕಾಶ್‌, ಹೊನ್ನಮ್ಮ, ನಿಶಾ ,ಮಾಲತಿ, ಸಾವಿತ್ರಿ, ಪುಟಾಣಿಗಳಾದ ರಿತಿಕಾ ಮತ್ತು ಚಾರ್ವಿಕಾ ಅವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next