Advertisement

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

04:44 PM May 18, 2020 | Suhan S |

ಹಿರೇಕೆರೂರ: ಕೋವಿಡ್‌-19 ಸೋಂಕು ಹರಡದಂತೆ ತಡೆಯಲು ಜನತೆ ಜಾಗೃತರಾಗುವ ಜೊತೆಗೆ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ತಾಲೂಕಿನಲ್ಲಿ ಅಬಲೂರು ಗ್ರಾಮದಲ್ಲಿ ಕೋಡ ಗ್ರಾಮದವರೆಗೆ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೋವಿಡ್‌ ಅನಗತ್ಯವಾಗಿ ಹೊರಗೆ ಓಡಾಟ ಮಾಡದೇ, ಗುಂಪುಗೂಡದೇ ರೋಗ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ರಾಜು ಬಣಕಾರ, ಆರ್‌.ಎಚ್‌. ಭಾಗವಾನ್‌, ತಾಪಂ ಇಒ ಶ್ರೀನಿವಾಸ, ಲಲಿತಾ ಕಣವೇರ, ದೊಡ್ಡಗೌಡ ಪಾಟೀಲ, ಆರ್‌.ಎನ್‌. ಗಂಗೋಳ, ಪ್ರಕಾಶಗೌಡ ಗೌಡರ, ಸುರೇಶ ಕುರವತ್ತೇರ, ಚಂದ್ರಪ್ಪ ಮಡಿವಾಳರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next