Advertisement

ಜೋಡು ಮಾರುತಿ ಮಂದಿರದ ರಸ್ತೆ ನಿರ್ಮಾಣ

04:50 PM Jul 03, 2020 | Suhan S |

ಸವಣೂರು: ಪಟ್ಟಣ ಹೊರವಲಯದ ಜೋಡು ಮಾರುತಿ ದೇವಸ್ಥಾನದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಉದ್ಯಮಿ ಹಾಗೂ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಪುತ್ರ ಸುಮಂತ ಸಿಂಧೂರ ಚಾಲನೆ ನೀಡಿದರು.

Advertisement

ಪಟ್ಟಣದ ಬಸವನಕಟ್ಟೆ ಕೆರೆ ದಂಡೆಯ ಕೆಳಗಡೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರಸಿದ್ಧ ಜೋಡು ಮಾರುತಿ ದೇವಸ್ಥಾನಕ್ಕೆ ಬರಲು ಭಕ್ತರು ಕೆರೆ ದಂಡೆಯ ಮೇಲಿರುವ ರಸ್ತೆ ಮೂಲಕ ಬರಬೇಕಾಗಿದ್ದು, ಎಷ್ಟೋ ವರ್ಷಗಳಿಂದ ದುರಸ್ತಿ ಕಾಣದೇ ಮಳೆಯಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಭಕ್ತರಿಗೆ ತೊಂದರೆ ಆಗುತ್ತಿರುವುದರಿಂದ ದೇವಸ್ಥಾನದ ಭಕ್ತರಾದ ಸಿಂಧೂರ ಕುಟುಂಬಸ್ಥರು ಸ್ವಯಂ ಪ್ರೇರಣೆಯಿಂದ ಡಾಂಬರೀಕರಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೇವಸ್ಥಾನಕ್ಕೆ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುವಂತಾಗಲಿದೆ ಎಂದು ಹಿರಿಯ ಪತ್ರಕರ್ತ ಜಯತೀರ್ಥ ದೇಶಪಾಂಡೆ ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳು ಸಿಂಧೂರ ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸಿದರು. ಯೋಗೇಂದ್ರ ಜಂಬಗಿ, ಉಮೇಶ ದಾಮೋದರ, ಶ್ರೀನಿವಾಸ ಖಾರದ, ಮಾಹಂತೇಶ ಸುಣಗಾರ, ಮುರಗೇಶ ಮಿರ್ಜಿ, ಹರೀಶ ಕ್ಷೌರದ, ಅರ್ಚಕರಾದ ಸ್ರಿàನಿವಾಸ ಜೋಶಿ ಇನನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next