Advertisement

ಅಪಘಾತ: ಮೂವರ ದುರ್ಮರಣ

07:00 AM Nov 15, 2018 | Team Udayavani |

ಕೂಡ್ಲಿಗಿ: ಟ್ರ್ಯಾಕ್ಸ್‌ ಹಾಗೂ ಲಾರಿ ಮಧ್ಯೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, 9 ಮಂದಿ ಗಾಯಗೊಂಡ ಘಟನೆ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬುಧವಾರ ಮುಂಜಾನೆ ನಡೆದಿದೆ.

Advertisement

ವಿಜಯಪುರ ಜಿಲ್ಲೆ ಚಿಕ್ಕ ಅಸಂಗಿ ಗ್ರಾಮದ ಬೀಬಿನ್‌ (43), ಶಬನಾ (22), ರಬೀನಾ ( 41) ಮೃತರು. ಮಹಮದ್‌ ನಂದ್ಯಾಲ, ಅಫಾ ನಂದ್ಯಾಲ್‌, ಗಪೂರ್‌ ನಂದ್ಯಾಲ್‌, ನಾಸೀರ್‌ ನಂದ್ಯಾಲ್‌, ರಾಜು ಮಹಮದ್‌, ಕರೀಷ್ಮಾ ಹಾದಿಮನಿ, ಮಸ್ತಾನ್‌, ಸೀನಾ ರಾಬೀ ಹಾಗೂ ಚಾಲಕ ಮಸ್ತಾನ್‌ ಗಂಭೀರವಾಗಿ ಗಾಯಗೊಂಡಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ.

15 ಮಂದಿ ಸಂಬಂಧಿಗಳು ಟ್ರ್ಯಾಕ್ಸ್‌ನಲ್ಲಿ ಮೈಸೂರು ಪ್ರವಾಸಕ್ಕೆ ತೆರಳಿದ್ದವರು. ಪ್ರವಾಸ ಬಳಿಕ ಟ್ರ್ಯಾಕ್ಸ್‌ ಕೂಡ್ಲಿಗಿಯಿಂದ ಹೊಸಪೇಟೆ ಮಾರ್ಗವಾಗಿ ವಿಜಾಪುರಕ್ಕೆ ಹೊರಟಿತ್ತು. ಲಾರಿ ಗಂಗಾವತಿಯಿಂದ ಚಿತ್ರದುರ್ಗದತ್ತ  ಹೊರಟಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಸ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂಭಾಗದ ಎರಡು ಟೈರ್‌ ಕಳಚಿ ಬಿದ್ದಿವೆ. ಟ್ರ್ಯಾಕ್ಸ್‌ ಚಾಲಕ ಮುಸ್ತಾನ್‌ ಅಪಘಾತದಲ್ಲಿ ಬದುಕುಳಿದಿದ್ದು, ಗಂಭೀರ ಗಾಯಗಳಾಗಿವೆ. ಆದರೆ, ಈತನ ಪತ್ನಿ ಬೀಬಿನ್‌ ಹಾಗೂ ಮಗಳು ಶಬಾನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲಾರಿ ಚಾಲಕ  ಪರಾರಿಯಾಗಿದ್ದಾನೆ. ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next