Advertisement

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಶೆ.10 ಇಳಿಸಲು ಮನವಿ

11:20 AM Jan 28, 2018 | |

ಬೆಂಗಳೂರು: ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಶೇ.10 ರಷ್ಟು ಇಳಿಸಲು ಸಿಎಂ  ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಇಳಿಸಲು ಕೋರಲಾಗುವುದು ಎಂದು ಹೇಳಿದರು. ಬಜೆಟ್‌ ಕುರಿತು ಭಾನುವಾರ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಈ ಬಗ್ಗೆ ನಾನು ಇಲಾಖೆ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಪ್ರಯಾಣ ದರ ಇಳಿಕೆಗೆ ಮನವಿ ಮಾಡಲಾಗುವುದು ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಹಲವು  ಯೋಜನೆ ಪ್ರಕಟಿಸಲು ತೀರ್ಮಾನಿಸಲಾಗಿದ್ದು, ಸಾರಿಗೆ ಇಲಾಖೆಗೆ 1000 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲು ಬೇಡಿಕೆ ಇಡಲಾಗುವುದು ಎಂದು ಹೇಳಿದರು.

ರಿಯಾಯಿತಿ ಬಸ್‌ ಪಾಸ್‌ ಬಾಕಿ ಹಣ 341 ಕೋಟಿ ರೂ. ಸರ್ಕಾರದ ಬಳಿಯೇ ಇದೆ. ಇದನ್ನು ಕೊಡುವಂತೆ ಒತ್ತಾಯ ಮಾಡುತ್ತೇವೆ. ರೈತರಿಗೆ ಟ್ರ್ಯಾಕ್ಟರ್‌ ಲೈಸೆನ್ಸ್‌ ಮತ್ತು ಡ್ರೈವಿಂಗ್‌ ತರಬೇತಿ ಉಚಿತ ನೀಡುವ ಪ್ರಸ್ತಾವನೆಯೂ ಇದ್ದು ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು.

ಎಚ್‌ಟಿವಿ (ಹೆವಿ ಟ್ರಾನ್ಸ್‌ಪೊàರ್ಟ್‌ ವೆಹಿಕಲ್‌) ಲೈಸೆನ್ಸ್‌ ಪಡೆಯಲು ಮುಂದಾಗುವ ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ಲೈಸೆನ್ಸ್‌ ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next