Advertisement

ನವೀಕೃತ ಬೆಥನಿ ಕಾನ್ವೆಂಟ್  ಚಾಪೆಲ್‌ ಉದ್ಘಾಟನೆ

03:15 PM May 09, 2018 | |

ಮಹಾನಗರ: ನಗರದ ಬೆಂದೂರ್‌ನಲ್ಲಿರುವ ಬೆಥನಿ ಕಾನ್ವೆಂಟ್‌ ಚಾಪೆಲ್‌ ಕಟ್ಟಡವನ್ನು ನವೀಕರಿಸಲಾಗಿದ್ದು, ಅದರ ಉದ್ಘಾಟನೆಯನ್ನು ಮಂಗಳೂರಿನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಅವರು ಮೇ 8ರಂದು ನೆರವೇರಿಸಿದರು.

Advertisement

ಬೆಳ್ಳಿ ಹಬ್ಬ
ಇದೇ ಸಂದರ್ಭ ಬೆಥನಿ ಸಂಸ್ಥೆಯ 27 ಮಂದಿ ಧರ್ಮ ಭಗಿನಿಯರು ತಮ್ಮ ಧಾರ್ಮಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿದರು. ಬೆಥನಿ ಸಂಸ್ಥೆಯ ಸ್ಥಾಪಕ ದೇವರ ಸೇವಕ ಮೊ| ಆರ್‌.ಎಫ್‌.ಸಿ. ಮಸ್ಕರೇನ್ಹಸ್‌ ಅವರು 1934ರಲ್ಲಿ ಈ ಚಾಪೆಲ್‌ನ್ನು ಕಟ್ಟಿಸಿದ್ದು, ಅದು ಸಂಸ್ಥೆಯ ಪಾರಂಪರಿಕ ಕಟ್ಟಡವಾಗಿದೆ.

ಬಲಿ ಪೂಜೆ
ಬಿಷಪ್‌ ಅಲೋಶಿಯಸ್‌ ಡಿ’ಸೋಜಾ ಅವರು ಇತರ 6 ಮಂದಿ ಧರ್ಮ ಗುರುಗಳ ಜತೆ ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು. ಬೆಂದೂರು ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌ನ ವಂ| ಆ್ಯಂಟನಿ ಶೆರಾ ಅವರು ಪ್ರವಚನ ನೀಡಿದರು. ಬೆಥನಿ ಸಂಸ್ಥೆಯ ಸುಪೀರಿಯರ್‌ ಜನರಲ್‌ ಸಿ| ರೋಸ್‌ ಸೆಲಿನ್‌ ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿರುವ ಭಗಿನಿಯರನ್ನು ಅಭಿನಂದಿಸಿದರು. ಬಲಿ ಪೂಜೆಯ ಬಳಿಕ ಅಭಿನಂದನ ಸಮಾರಂಭ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next