Advertisement

ಪರಿಹಾರ ಸಾಮಗ್ರಿ ರವಾನೆ

11:59 AM Aug 19, 2018 | Team Udayavani |

ಬೆಂಗಳೂರು: ಮಳೆಯಿಂದ ತೊಂದರೆ ಗೊಳಗಾದ ಕೊಡಗು ಜಿಲ್ಲೆಯ ಜನರಿಗೆ ಅಗತ್ಯವಾದ ಆಹಾರ ಪದಾರ್ಥ, ಔಷಧ, ಬಿಸ್ಕೆಟ್‌, ಬ್ಲಾಂಕೆಟ್‌, ಅಕ್ಕಿ, ಸೀರೆ,  ನೈಟಿ, ಸ್ಯಾನಿಟರಿ ಪ್ಯಾಡ್‌ ಸೇರಿದಂತೆ ರಾಜ್ಯ ಬಿಜೆಪಿಯಿಂದ ಸಂಗ್ರಹಿಸಿದ ಒಂದು ಲಾರಿ ಲೋಡ್‌ ಪರಿಹಾರ ಸಾಮಗ್ರಿಗಳನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಖುದ್ದುಗಾಗಿ ಕೊಡಗಿಗೆ ಕೊಂಡೊಯ್ದರು. 

Advertisement

ಕೊಡಗು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು ಮನೆಗಳನ್ನು ಕಳೆದುಕೊಂಡವರಿಗೆ ಬಟ್ಟೆ, ಬ್ಲಾಂಕೆಟ್‌ ಮತ್ತಿತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋ ಗುತ್ತಿದ್ದೇನೆ. ಮಳೆಯಿಂದ  ಹಾನಿಗೊಳಗಾದ ಉಳಿದ ಜಿಲ್ಲೆಗಳಿಗೂ ಪರಿಹಾರ ಸಾಮಗ್ರಿ ಕಳುಹಿಸಲು ಬಿಜೆಪಿ ಸಿದ್ಧವಿದೆ. ಸಾರ್ವಜನಿಕರು ಉದಾರ ನೆರವು ನೀಡಬೇಕು ಎಂದು ಮನವಿ  ಮಾಡಿದರು. 

ಕಾಂಗ್ರೆಸ್‌ ನಿಧಿ: ಕೆಪಿಸಿಸಿ ವತಿಯಿಂದಲೂ ಸಂತ್ರಸ್ತ್ರರಿಗೆ ಪರಿಹಾರ ನಿಧಿ ಸ್ಥಾಪಿಸಲಾಗಿದ್ದು, ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ  ಸಮಿತಿ ಸಹ ರಚಿಸಲಾಗಿದೆ. ಕೊಡಗು ಜಿಲ್ಲೆಗೆ ಆಹಾರ ಪದಾರ್ಥ, ಔಷಧ, ಉಡುಪಿ ಸೇರಿದಂತೆ ಪರಿಹಾರ ಸಾಮಗ್ರಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ  ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ತಿಳಿಸಿದ್ದಾರೆ. 

ನಟ ಶಿವರಾಜ್‌ಕುಮಾರ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ಕೊಡಗು ಮಳೆ ಸಂತ್ರಸ್ತರಿಗೆ ಉದಾರವಾಗಿ ನೆರವು ನೀಡುವಂತೆ ಕೋರಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next