Advertisement

ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್‌ ಸಮಸ್ಯೆ

02:41 PM Jan 06, 2023 | Team Udayavani |

ವರ್ಷ ಆರಂಭವಾಗಿದೆ. ಮತ್ತೆ ಸಿನಿಮಾ ಜಾತ್ರೆ ಶುರುವಾಗಿದೆ. 2022ರ ಅದೃಷ್ಟದ ನೆನಪು ಒಂದು ಕಡೆಯಾದರೆ 2023 ಆಶಾಭಾವನೆಯೊಂದಿಗೆ ಸಿನಿಮಾ ಬಿಡುಗಡೆಯಾಗುತ್ತಿವೆ. ಮೊದಲ ವಾರ (ಜ.06) ಕನ್ನಡದಿಂದ 9 ಸಿನಿಮಾಗಳು ತೆರೆಕಾಣುತ್ತಿವೆ. ಹಾಗಾದರೆ, ಮುಂದಿನ ವಾರ ಅಂದರೆ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಿಂದ ಬರುತ್ತಿರುವ ಸ್ಟಾರ್‌ ಸಿನಿಮಾ ಯಾವುದು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿಯಲ್ಲಿ ಪರಭಾಷಾ ಅಬ್ಬರ ಜೋರಾಗಿರಲಿದೆ.

Advertisement

ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಪರಭಾಷಾ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಅಖಾಡಕ್ಕೆ ಇಳಿಯುತ್ತಿವೆ. ಹೀಗಾಗಿ, ಸಂಕ್ರಾಂತಿಗೆ ಕನ್ನಡದಿಂದ ಯಾವುದೇ ದೊಡ್ಡ ಸ್ಟಾರ್‌ ಸಿನಿಮಾಗಳು ಘೋಷಣೆಯಾಗಿಲ ತಮಿಳಿನ ಎರಡು ಹಾಗೂ ತೆಲುಗಿನ ಎರಡು ಸಿನಿಮಾಗಳು ಸಂಕ್ರಾಂತಿಗೆ ಅಭಿಮಾನಿಗಳನ್ನು ರಂಜಿಸಲಿವೆ.

ತಮಿಳಿನಿಂದ ವಿಜಯ್‌ ನಟನೆಯ “ವಾರಿಸು’ ಹಾಗೂ ಅಜಿತ್‌ ನಟನೆಯ “ತುನಿವು’ ಚಿತ್ರಗಳು ಬಿಡುಗಡೆಯಾದರೆ, ತೆಲುಗಿನಿಂದ ಮೆಗಾಸ್ಟಾರ್‌ ಚಿರಂಜೀವಿ ನಟನೆಯ “ವಾಲ್ಟರ್‌ ವೀರಯ್ಯ’ ಹಾಗೂ ಬಾಲಕೃಷ್ಣ ನಾಯಕರಾ ಗಿರುವ “ವೀರಸಿಂಹ ರೆಡ್ಡಿ’ ಚಿತ್ರಗಳು ಸಂಕ್ರಾಂತಿಗೆ ತೆರೆಕಾಣುತ್ತಿವೆ. ಈ ಎಲ್ಲಾ ನಟರಿಗೂ ದೊಡ್ಡ ಫ್ಯಾನ್‌ಬೇಸ್‌ ಇರುವುದರಿಂದ ಸಿನಿಮಾಗಳು “ಹಬ್ಬ’ವಾಗಲಿದೆ. “ವಾರಿಸು’ ಹಾಗೂ “ತುನಿವು’ ಚಿತ್ರಗಳು ಜ.11ರಂದು ತೆರೆಕಂಡರೆ, ತೆಲುಗಿನ “ವೀರ ಸಿಂಹ ರೆಡ್ಡಿ’ ಜ.12ರಂದು ಹಾಗೂ “ವಾಲ್ಟರ್‌ ವೀರಯ್ಯ’ ಜ.13ರಂದು ಬಿಡುಗಡೆಯಾಗುತ್ತಿವೆ ಈಗಾಗಲೇ ಈ ಸಿನಿಮಾಳ ಹಾಡು, ಟೀಸರ್‌, ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಸಿನಿಮಾ ಅಭಿಮಾನಿಗಳಲ್ಲಿ ಕ್ರೇಜ್‌ ಕೂಡಾ ಹೆಚ್ಚಾಗಿದೆ. ಹಾಗಾಗಿ, ಸಂಕ್ರಾಂತಿಗೆ ಕರ್ನಾಟಕದಲ್ಲೂ ಪರಭಾಷಾ ಸಿನಿಮಾಗಳ ಅಬ್ಬರ ಜೋರಾಗಿಯೇ ಇರಲಿದೆ.

‌ಕನ್ನಡದಿಂದ ಹೊಸಬರ ಸಿನಿಮಾ

ಮೊದಲೇ ಹೇಳಿದಂತೆ ಕನ್ನಡದಿಂದ ಯಾವುದೇ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸಬರ ಒಂದೆರಡು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದಕ್ಕೆ ಕಾರಣ ಚಿತ್ರಮಂದಿರಗಳ ಸಮಸ್ಯೆ. ಹೌದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಪರಭಾಷೆಯ 4 ಚಿತ್ರಗಳು ಕೂಡಾ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಹಾಗಾಗಿ, ಕನ್ನಡ ಚಿತ್ರಗಳಿಗೆ ಮತ್ತೆ ಚಿತ್ರಮಂದಿರಗಳ ಸಮಸ್ಯೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಸಮಸ್ಯೆ ಕಾಡಲಿದೆ.

Advertisement

ಜನವರಿ ಬಿಡುಗಡೆಯಲ್ಲಿ ಇಳಿಕೆ

ಹೊಸ ವರ್ಷದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆಯಾದರೂ ಜನವರಿಯಲ್ಲಿ ಮಾತ್ರ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಈ ವಾರ 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ಮುಂದಿನ ವಾರ ಮೂರ್‍ನಾಲ್ಕು ಹಾಗೂ ಜ.20ಕ್ಕೆ ಮೂರ್‍ನಾಲ್ಕು ಸಿನಿಮಾಗಳಷ್ಟೇ ತೆರೆಕಾಣುತ್ತಿವೆ. ಅದಕ್ಕೆ ಸಂಕ್ರಾಂತಿಗೆ ತೆರೆಕಾಣುತ್ತಿರುವ ಪರಭಾಷಾ ಸಿನಿಮಾಗಳು ಒಂದು ಕಡೆಯಾದರೆ, ಜ.25ರಂದು ಶಾರುಖ್‌ ಖಾನ್‌ “ಪಠಾಣ್‌’ ಹಾಗೂ ಜ.26ರಂದು ದರ್ಶನ್‌ “ಕ್ರಾಂತಿ’ ತೆರೆಗೆ ಬರುತ್ತಿರುವುದು ಮತ್ತೂಂದು ಕಾರಣ. ಸದ್ಯ “ಕ್ರಾಂತಿ’ ಜೊತೆ ಕನ್ನಡದಿಂದ ಯಾವ ಸಿನಿಮಾವೂ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ.

ವಿಜಯ್ ಗ್ರ್ಯಾಂಡ್ ಎಂಟ್ರಿ

ನಟ ದುನಿಯಾ ವಿಜಯ್‌ ತೆಲುಗಿನ “ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಕೃಷ್ಣ ಅವರ ಎದುರು ವಿಲನ್‌ ಆಗಿ ಅಬ್ಬರಿಸಿದ್ದಾರೆ. ಸಖತ್‌ ರಗಡ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್‌ “ವೀರಸಿಂಹರೆಡ್ಡಿ’ ಚಿತ್ರದ ಮೂಲಕ ತೆಲುಗಿಗೆ ಗ್ರ್ಯಾಂಡ್‌ ಎಂಟ್ರಿಕೊಡಲಿದ್ದಾರೆ. ಇನ್ನು, ಕನ್ನಡದಲ್ಲಿ ಅವರ ನಿರ್ದೇಶನ, ನಟನೆಯ “ಭೀಮ’ ಚಿತ್ರ ಚಿತ್ರೀಕರಣದಲ್ಲಿದ್ದು, ಈ ವರ್ಷವೇ ತೆರೆಕಾಣಲಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next