Advertisement

Ratan Tata: 10 ವರ್ಷ ಹಿಂದೆ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿದ್ದ ರತನ್‌ ಟಾಟಾ

04:46 PM Oct 11, 2024 | Team Udayavani |

ಉಡುಪಿ: ಬುಧವಾರ ರಾತ್ರಿ ನಿಧನ ಹೊಂದಿದ ಉದ್ಯಮ ಜಗತ್ತಿನ ದಿಗ್ಗಜ ರತನ್‌ ಟಾಟಾ ಅವರು ಹತ್ತು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿ ಹಿರಿಯಡಕ ಸಮೀಪದ ಪುತ್ತಿಗೆ ಮೂಲ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಪುತ್ತಿಗೆ ಮಠದ ನರಸಿಂಹ ಮತ್ತು ಗಣಪತಿ ದೇವರ ದರ್ಶನ ಮಾಡಿದ್ದ ಅವರು ಮಠದ ಸ್ವಾಗತ ಗೋಪುರವನ್ನು 2014ರ ಫೆ. 10ರಂದು ಉದ್ಘಾಟಿಸಿ ಮಠದ ಗ್ರಾಮೀಣ ಪರಿಸರಕ್ಕೆ ಮನಸೋತು ಶುಭ ಕೋರಿದ್ದರು. ರತನ್‌ ಟಾಟಾ ಅವರು ಯುವ ಪೀಳಿಗೆಗೆ ಬದುಕು ಮತ್ತು ಸಾಧನೆಗೆ ಸ್ಫೂರ್ತಿದಾತರು ಎಂದು ಪುತ್ತಿಗೆ ಶ್ರೀಗಳು ಅಂದು ಹೇಳಿದ್ದರು. ಅಮೆರಿಕದಲ್ಲಿರುವ ಪುತ್ತಿಗೆ ಮಠದ ಶಾಖೆಗೂ ರತನ್‌ ಟಾಟಾ ಭೇಟಿ ನೀಡಿದ್ದರು.

ತಮ್ಮ ಹಿಂದಿನ ಸಂಪರ್ಕವನ್ನು ಮೆಲುಕು ಹಾಕಿದ ಪುತ್ತಿಗೆ ಶ್ರೀಗಳು ರತನ್‌ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೇಶ ಮೊದಲು ಎಂಬ ತಣ್ತೀ ಹೊಂದಿದ್ದ ರತನ್‌ ಟಾಟಾ ಹಿಂದೆ ಮೂಲಮಠಕ್ಕೆ ಆಗಮಿಸಿದಾಗ ಭಗವದ್ಗೀತೆ ಕುರಿತು ತಮಗಿದ್ದ ಆದರವನ್ನು ಪ್ರಕಟಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಶ್ರೀಕೃಷ್ಣ ಮುಖ್ಯಪ್ರಾಣರನ್ನು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

Advertisement

Udayavani is now on Telegram. Click here to join our channel and stay updated with the latest news.

Next