Advertisement

ರಮೇಶ್‌ ಸಮಸ್ಯೆ 8ನೇ ಅದ್ಭುತ: ಸತೀಶ್‌ ಜಾರಕಿಹೊಳಿ

11:20 PM Jul 03, 2019 | Team Udayavani |

ಬೆಂಗಳೂರು: “ರಮೇಶ್‌ ಜಾರಕಿಹೊಳಿ ಸಮಸ್ಯೆ ಏನು ಎನ್ನುವುದು ಇದುವರೆಗೂ ಗೊತ್ತಾಗುತ್ತಿಲ್ಲ. ಅದೊಂದು ಎಂಟನೇ ಅದ್ಭುತವಾಗಿದೆ’ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ರಮೇಶ್‌ ಹಾಗೂ ನನ್ನದು ರಾಜಕೀಯ ಬೇರೆ, ವ್ಯವಹಾರ ಬೇರೆ. ಅವರು ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ರಾಜೀನಾಮೆ ತಮಗೆ ತಲುಪಿಲ್ಲ ಅಂತಿದ್ದಾರೆ ಎಂದರು.

Advertisement

ಇದೇ ವೇಳೆ, ಲಖನ್‌ ಜಾರಕಿಹೊಳಿ “ಥ್ರಿ ಈಡಿಯೆಟ್ಸ್‌ ‘ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್‌ ರಾಜೀನಾಮೆಗೆ ಅವರ ಅಳಿಯಂದಿರೇ ಕಾರಣ. ಈ ಹಿಂದೆಯೂ ಇದನ್ನೇ ಹೇಳಿದ್ದೆ ಎಂದರು. ರಮೇಶ್‌ ಇನ್ನೂ ರಾಜೀನಾಮೆ ನೀಡಿಲ್ಲ. ಅವರು ರಾಜೀನಾಮೆ ನೀಡಿದರೆ ಚುನಾವಣೆ ಮಾಡಬೇಕಾಗುತ್ತದೆ. ಆ ಸ್ಥಾನಕ್ಕೆ ಪಕ್ಷದ ಹೈಕಮಾಂಡ್‌ ಯಾರ ಹೆಸರನ್ನು ಸೂಚಿಸುತ್ತದೆಯೋ ಅವರನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next