Advertisement

ಕೋವಿಂದ್‌ ಇಂದು ಬೆಂಗಳೂರಿಗೆ 

03:45 AM Jul 05, 2017 | Team Udayavani |

ಬೆಂಗಳೂರು: ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರು ಮತಯಾಚನೆ ಸಲುವಾಗಿ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿ ಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಶಾಸಕರು, ಸಂಸದರ ವಿಶೇಷ ಸಭೆ ಕರೆಯಲಾಗಿದ್ದು, ರಾಮನಾಥ್‌ ಕೋವಿಂದ್‌ ಅವರು ಸಭೆಯಲ್ಲಿ ಭಾಗವಹಿಸಿ ಅನೌಪಚಾರಿಕವಾಗಿ ಶಾಸಕರು, ಸಂಸದರ ಜತೆ ಚರ್ಚಿಸುವುದರ ಜತೆಗೆ ಮತಯಾಚನೆ ಮಾಡಲಿದ್ದಾರೆ.

Advertisement

ಕೋವಿಂದ್‌ ವಿಶೇಷ ವಿಮಾನದ ಮೂಲಕ ಬುಧವಾರ ಬೆಳಗ್ಗೆ 10.30ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಸದಾನಂದ ಗೌಡ ಮತ್ತಿತರರು ಕೋವಿಂದ್‌ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next