Advertisement

ರಾಜ್ಯಸಭೆ ಚುನಾವಣೆ: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ತೀವ್ರ ಲಾಬಿ

01:39 AM Jun 04, 2020 | Sriram |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಿಗದಿಯಾಗಿದ್ದು, ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರಕ್ಕೆ ರವಾನಿಸುವ ಸಾಧ್ಯತೆ ಇದೆ.

Advertisement

ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಮರು ಆಯ್ಕೆ  ಬಯಸಿದ್ದರೆ, ಮಾಜಿ ಸಂಸದ ರಮೇಶ್‌ ಕತ್ತಿ ಆಕಾಂಕ್ಷಿಯಾಗಿ ದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ| ಎಂ. ನಾಗರಾಜ್‌, ಉದ್ಯಮಿ ಪ್ರಕಾಶ್‌ ಶೆಟ್ಟಿ ಬಿಜೆಪಿಯಿಂದ ರಾಜ್ಯಸಭೆ ಪ್ರವೇಶಿ ಸುವ ಬಯಕೆಯಲ್ಲಿದ್ದಾರೆ. ಈ ನಡುವೆ ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್‌ ಅವರ ಹೆಸರನ್ನು ಕೇಂದ್ರ ನಾಯಕರು ಸೂಚಿಸಿದರೂ ಅಚ್ಚರಿಯಲ್ಲ ಎಂಬ ಮಾತುಗಳಿವೆ.ನಾಮಪತ್ರ ಸಲ್ಲಿಕೆಗೆ ಜೂ. 9 ಕೊನೆಯ ದಿನವಾಗಿದ್ದು,ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಲಾಬಿ ಚುರುಕುಗೊಂಡಿದೆ.

ಸದ್ಯ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಘೋಷಣೆ ಯಾಗಿದ್ದು, ಬಿಜೆಪಿ ಅನಾಯಾಸವಾಗಿ 2 ಸ್ಥಾನ ಗೆಲ್ಲಲು ಅವಕಾಶವಿದೆ. ಅದರಂತೆ ಬೆಳಗಾವಿಯ ಪ್ರಭಾಕರ ಕೋರೆ ಹಾಗೂ ರಮೇಶ್‌ ಕತ್ತಿ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಮತ್ತೊಂದು ಅವಧಿಗೆ ಅವಕಾಶ ನೀಡಬೇಕು ಎಂದು ಪ್ರಭಾಕರ ಕೋರೆ ಮನವಿ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಸಂದರ್ಭ ರಾಜ್ಯಸಭೆಗೆ ಆಯ್ಕೆ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ಅವಕಾಶ ಕಲ್ಪಿಸ ಬೇಕು ಎಂದು ಕತ್ತಿ ಸಹೋದರರು ಒತ್ತಡ ಹೇರುತ್ತಿದ್ದಾರೆ.

ಇನ್ಫೋಸಿಸ್‌ ಮಾಜಿ ಅಧ್ಯಕ್ಷ ಕುಂದಾಪುರ ಮೂಲದ ಕೆ.ವಿ. ಕಾಮತ್‌ರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಕುರಿತು ಕೇಂದ್ರದ ಬಿಜೆಪಿ ವಲಯದಲ್ಲಿ ಚಿಂತನೆ ನಡೆದಿದೆ.

Advertisement

ಶನಿವಾರ ಕೋರ್‌ ಕಮಿಟಿ ಸಭೆ
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಭಾಕರ ಕೋರೆ, ರಮೇಶ್‌ ಕತ್ತಿ, ಡಾ| ಎಂ. ನಾಗರಾಜ್‌, ಪ್ರಕಾಶ್‌ ಶೆಟ್ಟಿ ಅವರು ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶನಿವಾರ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿದೆ. ಬಳಿಕ ಸಂಭಾವ್ಯರ ಪಟ್ಟಿ ವರಿಷ್ಠರಿಗೆ ರವಾನೆಯಾಗಲಿದೆ. ಈ ನಡುವೆ ವರಿಷ್ಠರು ನಿರ್ದಿಷ್ಟ ಹೆಸರು ಸೂಚಿಸಿದರೂ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next