Advertisement

ದನವನ್ನೇ ವಿಧಾನಸಭೆಗೆ ತಂದ ರಾಜಸ್ಥಾನದ ಬಿಜೆಪಿ ಶಾಸಕ!

07:38 PM Sep 19, 2022 | Team Udayavani |

ಜೈಪುರ: ರಾಜಸ್ಥಾನದಲ್ಲಿ ಹಸುಗಳಿಗೆ ಚರ್ಮಗಂಟು ರೋಗ ಹೆಚ್ಚಾಗುತ್ತಿರುವ ಹಿನ್ನೆಲೆ, ಸರ್ಕಾರದ ಗಮನವನ್ನು ಅದರತ್ತ ಸೆಳೆಯಲು ಬಿಜೆಪಿಯ ಶಾಸಕರೊಬ್ಬರು ಸೋಮವಾರ ಹಸುವನ್ನೇ ವಿಧಾನಸಭೆಗೆ ಕರೆದುಕೊಂಡು ಬಂದಿದ್ದರು.

Advertisement

ಹೀಗೆ ಮಾಡಿರುವುದು ಪುಷ್ಕರ್‌ ಕ್ಷೇತ್ರದ ಶಾಸಕ ಸುರೇಶ್‌ ಸಿಂಗ್‌ ರಾವತ್‌. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ, ಹಸು ಗಾಬರಿಗೊಂಡ ಅಲ್ಲಿಂದ ಓಡಿ ಹೋಗಿದೆ.


ಈ ವೇಳೆ ಮಾತನಾಡಿದ ಅವರು, “ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಹಸುಗಳು ಸಾವನ್ನಪ್ಪುತ್ತಿವೆ. ಆದರೆ ನಮ್ಮ ಸರ್ಕಾರ ಮಾತ್ರ ನಿದ್ರೆಯಲ್ಲಿದೆ. ಗೋ ಮಾತೆಯೂ ಸರ್ಕಾರದ ಬಗ್ಗೆ ಕೋಪಗೊಂಡಿದ್ದಾಳೆ. ಅದಕ್ಕೇ ಹಸು ಕೂಡ ನಿಲ್ಲದೆ, ಓಡಿ ಹೋಯಿತು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next