Advertisement

ಭತ್ತ ಬೆಳೆಗಾರರಿಗೆ ವರುಣಾಘಾತ

07:28 PM May 02, 2020 | Suhan S |

ಸಿದ್ದಾಪುರ: ಗ್ರಾಮದಲ್ಲಿ ಶುಕ್ರವಾರ ಬಿರುಗಾಳಿ ಸಹಿತ ಮಳೆಯಾದ ಪರಿಣಾಮ ಕೋಟ್ಯಂತರ ರೂ. ಮೌಲ್ಯದ ಭತ್ತ ನೀರಲ್ಲಿ ನೆನೆದು ನಷ್ಟ ಸಂಭವಿಸಿದೆ. ಶುಕ್ರವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ 6:30 ರವರೆಗೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

Advertisement

ಇದರಿಂದಾಗಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಒಣಗಿಸಲು ಹಾಕಿದ್ದ ಭತ್ತ ನೀರಲ್ಲಿ ನೆನೆಯಿತು. ಇನ್ನೂ ಕೆಲ ರೈತರ ಭತ್ತ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಮೊನ್ನೆ ಮೊನ್ನೆ ಅಕಾಲಿಕ ಬಿರುಗಾಳಿ ಸಹಿತ ಮಳೆಯಿಂದಾಗಿ ಭತ್ತ ನೆಲಕ್ಕೆ ಬಿದ್ದು ನಷ್ಟ ಸಂಭವಿಸಿತ್ತು. ಶುಕ್ರವಾರ ಸುರಿದ ಮಳೆಯಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ರೈತರಾದ ವೀರೇಶ ಬಪ್ಪೂರ, ನಾಗರಾಜ ಸಂಕನಾಳ ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುರಿದ ಮಳೆಗೆ ಎಪಿಎಂಸಿ ಯಾರ್ಡ್‌ನಲ್ಲಿ ರೈತರು ಒಣಗಿಸಲು ಹಾಕಿದ ಭತ್ತದ ರಾಶಿಗಳು ಜಲಾವೃತಗೊಂಡಿವೆ. 8-10 ದಿನಗಳ ಹಿಂದೆ ಕಟಾವು ಮಾಡಿ ಎಪಿಎಂಸಿ ಯಾರ್ಡ್‌ನಲ್ಲಿ ಒಣಗಿಸಲು ಹಾಕಿದ್ದರು. ಯಾರ್ಡ್ ನಲ್ಲಿ ಹಾಕಿದ್ದ ಸುಮಾರು 150ರಿಂದ 200 ಎಕರೆಯಲ್ಲಿ ಬೆಳೆ ಭತ್ತ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next