Advertisement

ಆಲಿಕಲ್ಲು ಮಳೆಯಿಂದ ಬೆಳೆ ನಾಶ: ಪರಿಶೀಲನೆ

06:26 PM Apr 24, 2021 | Team Udayavani |

ಶಿಡ್ಲಘಟ್ಟ: ತಾಲೂಕಿನ ಬಶೆಟ್ಟಹಳ್ಳಿ ಗ್ರಾಪಂ ಸುತ್ತಮುತ್ತ ಆಲಿಕಲ್ಲು ಮಳೆಯಿಂದ ಬೆಳೆಗಳು ನಾಶವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಬೆಂಗಳೂರು ವಿಭಾಗೀಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿಶ್ವನಾಥ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಗುರುವಾರ ಸಂಜೆ ಬಿದ್ದ ಆಲಿಕಲ್ಲು ಮಳೆಯಿಂದ ಬಶೆಟ್ಟಹಳ್ಳಿ, ಗೌಡನಹಳ್ಳಿ,ಧನಮಿಟ್ಟನಹಳ್ಳಿ,ವಲಸೇನಹಳ್ಳಿ, ಮುದ್ದನದಿನ್ನೆ, ದ್ಯಾವರಹಳ್ಳಿಮತ್ತಿತರರು ಪ್ರದೇಶದಲ್ಲಿ ಹಾನಿಯಾಗಿರುವಬೆಳೆಗಳನ್ನು ತೋಟಗಾರಿಕೆ ಇಲಾಖೆಯ ಜಂಟಿನಿರ್ದೇಶಕರು ಮತ್ತು ತಹಶೀಲ್ದಾರ್‌ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ರೈತರು ನಷ್ಟ ಹೊಂದಿರುವಬೆಳೆಗಳನ್ನು ತೋರಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಸುಮಾರು 5-6 ಕೋಟಿ ನಷ್ಟ: ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು ಟೊಮೆಟೋ 90 ಎಕರೆ, ದ್ರಾಕ್ಷಿ 25 ಎಕರೆ, ಪಾಲಿಹೌಸ್‌ 7, ಕ್ಯಾಬೇಜ್‌ 2 ಎಕರೆ, ಹಾಗಲಕಾಯಿ 2 ಎಕರೆ, ಬೀನ್ಸ್‌ 3 ಎಕರೆ, ಚೆಂಡು ಹೂವು 2 ಎಕರೆ, ಬೀಟರೂಟ್‌ 3 ಎಕರೆ ಸಹಿತ 127 ಎಕರೆ ಬೆಳೆ ನಷ್ಟ ಸಂಭವಿಸಿರುವ ಕುರಿತು ಅಂದಾಜು ವರದಿಯನ್ನು ಸಿದ್ಧಪಡಿಸಿದ್ದಾರೆ.

ಇದರಿಂದ ಸುಮಾರು 5-6 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರಿ ಪರಿಹಾರಕ್ಕೆ ಆಗ್ರಹ: ಶಿಡ್ಲಘಟ್ಟ ತಾಲೂಕಿನಲ್ಲಿ ಮೊದಲ ಬಾರಿಗೆ ಬೃಹತ್‌ ಗಾತ್ರದ ಆಲಿಕಲ್ಲು ಸಹಿತ ಮಳೆ ಬಿದ್ದು ದ್ರಾಕ್ಷಿ, ಟೊಮೆಟೋ ಹಾಗೂ ತರಕಾರಿ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾ ಯಿಸಿದರು. ತೋಟಗಾರಿಕೆಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಮೇಶ್‌, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next